ಸಾಹಸಿ, ಸುಂದರಿಯಾದ ರಾಣಿ ಪದ್ಮಿನಿಯ ಅರಮನೆ ಇದು. ಈ ಅರಮನೆಯು ಚಿತ್ತೋರಗಢ ಕೋಟೆಯ ಒಳಗಿದೆ. ರಾಣಿ ಪದ್ಮಿನಿಯ ಸಾಹಸೀ ಮನೋವೃತ್ತಿಗೆ ಇದು ಸಾಕ್ಷಿಯಾಗಿದೆ. ಇಲ್ಲೊಂದು ಸುಮಧುರವಾದ ಕಮಲ ಕೊಳವಿದೆ. ಇಲ್ಲಿಯೇ ರಾಣಿ ಪದ್ಮಿನಿಯನ್ನು ಸುಲ್ತಾನ್ ಅಲಾವುದ್ದೀನ್ ಖಿಲ್ಜಿಯು ನೋಡಿದ ಎಂದು ಹೇಳಲಾಗುತ್ತದೆ. ಅವಳ ಅಪರೂಪದ ಸೌಂದರ್ಯಕ್ಕೆ ಮರುಳಾದ ಸುಲ್ತಾನ್ ಅವಳನ್ನು ಪಡೆಯುವುದಕ್ಕೆ ಹಂಬಲಿಸಿದ. ಇದರಿಂದ ಯುದ್ಧ ಏರ್ಪಡುವ ಸನ್ನಿವೇಶ ನಿರ್ಮಾಣವಾಯಿತು.ಈ ಅರಮನೆಯು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ ಮತ್ತು ಸುತ್ತಲಿನ ಪರಿಸರವು ಈ ಅರಮನೆಗೆ ಇನ್ನಷ್ಟು ಆಕರ್ಷಣೆಯನ್ನು ನೀಡಿದೆ. ಅರಮನೆಗೆ ಸಮೀಪದಲ್ಲಿ ನೀಲಕಂಠ ಮಹಾದೇವ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ.