ಸಮಯವಿದ್ದರೆ ಪ್ರಯಾಣಿಕರು ಕೆಮ್ಮಣ್ಣುಗುಂಡಿಯ ಮಾರ್ಗದಲ್ಲಿ ಬಾಬಾ ಬುಡನ್ ಗಿರಿ ಬೆಟ್ಟಗಳ ಹತ್ತಿರದಲ್ಲಿರುವ ಮಾಣಿಕ್ಯಧಾರಾ ಜಲಪಾತಕ್ಕೆ ಭೇಟಿ ನೀಡಬಹುದು. ಇದು ಚಿಕ್ಕಮಗಳೂರು ಪಟ್ಟಣದಿಂದ 40 ಕಿಮೀ ದೂರದಲ್ಲಿದೆ. ಶೋಲಾ ಅರಣ್ಯದ ಮಧ್ಯದಲ್ಲಿರುವ ಈ ಜಲಪಾತ ಮುಸ್ಲಿಮ್ ಮತ್ತು ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಮಾಣಿಕ್ಯಧಾರಾ ಅಂದರೆ ಅಕ್ಷರಶಃ ಮಾಣಿಕ್ಯಗಳಿಂದ ಪೋಣಿಸಲ್ಪಟ್ಟ ಧಾರೆ ಎಂದರ್ಥ, ಪ್ರಶಾಂತವಾದ ಮತ್ತು ಸಿನೀಯ ವಾತಾವರಣವನ್ನು ಹುಡುಕುತ್ತಿರುವ ಜನರಿಗೆ ಇದು ತಕ್ಕುದಾದ ಸ್ಥಳವಾಗಿದೆ.
ಸ್ಥಳೀಯ ನಂಬಿಕೆ ಪ್ರಕಾರ, ಸಂತ ಹಜರತ್ ದಾದಾ ಹಯಥ್ ಮೀರ್ ಖಲಂದರ್ ಮತ್ತು ಅವರ ನಾಲ್ವರು ಶಿಷ್ಯಂದಿರು ತಮ್ಮ ದಾಹ ತಣಿಸುವ ಸಲುವಾಗಿ ಈ ಪ್ರದೇಶಕ್ಕೆ ಬಂದಿದ್ದರು. ಸುದೀರ್ಘ ಕಾಯುವಿಕೆ ನಂತರ, ಅವರ ಪ್ರಾರ್ಥನೆಗೆ ಉತ್ತರವೆಂಬಂತೆ ಪರ್ವತಗಳ ಮೂಲದಿಂದ ಮಾಣಿಕ್ಯಧಾರಾ ಜಲಪಾತದ ನೀರು ಹರಿದು ಬಂದಿತು.
ಈ ನೀರು ಎಲ್ಲಾ ಚರ್ಮದ ಕಾಯಿಲೆಗಳನ್ನು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂದೂ ಇದು ಪವಿತ್ರವಾದ ಜಲ ಎಂದು ಸ್ಥಳೀಯರು ಪರಿಗಣಿಸುತ್ತಾರೆ. ಈ ಪ್ರದೇಶ ತಲುಪಿದ ಪ್ರವಾಸಿಗರು, ವಿವಿಧ ರೋಗಗಳನ್ನು ಗುಣಪಡಿಸುವ ಬಗೆಬಗೆಯ ಗಿಡಮೂಲಿಕಾ ಔಷಧಿಗಳನ್ನು ಮಾರುವ ಹತ್ತಿರದ ಸ್ಥಳೀಯ ಅಂಗಡಿಗಳನ್ನು ಕಾಣಬಹುದು.