ಚಿಕ್ಕಮಗಳೂರಿಗೆ ಬರುವ ಪ್ರಯಾಣಿಕರು ಇಲ್ಲಿರುವ ಹೆಸರುವಾಸಿಯಾದ ದತ್ತಾತ್ರೇಯ ಪೀಠ ಎಂದೂ ಕರೆಯಲ್ಪಡುವ ಬಾಬಾ ಬುಡನ್ ಗಿರಿ ಶ್ರೇಣಿಯನ್ನು ಭೇಟಿ ಮಾಡಬೇಕು. ಇದು 1895 ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರು ಪಟ್ಟಣದಿಂದ 28 ಕಿಮೀ ದೂರದಲ್ಲಿದೆ. ಮುಸ್ಲಿಮರು ಮತ್ತು ಹಿಂದೂಗಳಿಗೆ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಈ ಕಾರಣದಿಂದಾಗಿ, ಸ್ಥಳವನ್ನು ಹಿಂದೂ ದೇವರು ಗುರು ದತ್ತಾತ್ರೇಯ ಮತ್ತು ಮುಸ್ಲಿಂ ಸಂತ ಬಾಬಾಬುಡನ್ ರ ಹೆಸರಿನಿಂದ ಗುರುತಿಸಲಾಗುತ್ತದೆ.
ಬಾಬಾ ಬುಡನ್ ಗಿರಿಯಲ್ಲಿ ಪ್ರವಾಸಿಗರು ಮೂರು ಸಿದ್ಧರಿಂದ ಪವಿತ್ರವಾಗಿರುವವೆಂದು ನಂಬಲಾದ ಮೂರು ಗುಹೆಗಳನ್ನು ನೋಡಬಹುದು . ಶೀಥಲ -ಮಲ್ಲಿಕಾರ್ಜುನನ ಗುಡಿ ಮತ್ತು ಮಠಗಳೆರಡನ್ನೂ ಒಳಗೊಂಡಿರುವ ಶೀಥಲ ದೇವಾಲಯ ಹತ್ತಿರದಲ್ಲೇ ಇರುವ ಮತ್ತೊಂದು ಪ್ರಸಿದ್ಧ ಆಕರ್ಷಣೆಯಾಗಿದೆ. ಅನುಕೂಲವಾದರೆ ಪ್ರಯಾಣಿಕರು ಈ ಸ್ಥಳದಿಂದ ಕೇವಲ 1 ಕಿಮೀ ದೂರವಿರುವ ಮಾಣಿಕ್ಯಧಾರಾ ಜಲಪಾತವನ್ನು ನೋಡಬಹುದು.
ಬಾಬಾ ಬುಡನ್ ಗಿರಿ ಹೈಕಿಂಗ್ ಮತ್ತು ಚಾರಣಗಳ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಪರಿಪೂರ್ಣವಾದ ಜಾಗ. ಈ ಪ್ರದೇಶದ ವ್ಯಾಪ್ತಿಯ ಎರಡು ಜನಪ್ರಿಯ ಪರ್ವತಗಳೆಂದರೆ ಮುಳ್ಳಯ್ಯನಗಿರಿ (1930 ಮೀಟರ್ ಎತ್ತರದಲ್ಲಿ ಜೊತೆ ಸೈಟ್ ಶಿಖರ) ಮತ್ತು ದತ್ತಗಿರಿ. ಅದೃಷ್ಟವಿದ್ದರೆ ಜನರು 'ಕುರುಂಜಿ' ವೀಕ್ಷಿಸಲು ಅವಕಾಶ ಪಡೆಯುವರು. ಇದು ಒಂದು ಪರ್ವತದ ಹೂವಾಗಿದ್ದು ಪ್ರತಿ 12 ವರ್ಷಗಳಲ್ಲಿ ಒಮ್ಮೆ ಮಾತ್ರ ಅರಳುತ್ತದೆ. ಈ ಪ್ರದೇಶ ಹಕ್ಕಿಗಳ ವೀಕ್ಷಣೆ ಕೈಗೊಳ್ಳಲು ಬಯಸುವ ಜನರಿಗೆ ಅತ್ಯುತ್ತಮ ಆಯ್ಕೆಯಾಗಿದೆ.