ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುವ ಪ್ರಯಾಣಿಕರು ಅನುಕೂಲವಾದರೆ ಪಟ್ಟಣದ ಉತ್ತರಕ್ಕೆ 67 ಕಿಮೀ ದೂರದಲ್ಲಿರುವ ಅಮೃತೇಶ್ವರ ದೇವಾಲಯವನ್ನು ನೋಡಬಹುದು. ಈ ಯಾತ್ರಾಸ್ಥಳವನ್ನು ವೀರ ಬಲ್ಲಾಳ II (ಹೊಯ್ಸಳ ರಾಜ) ನ ಆಳ್ವಿಕೆಯಲ್ಲಿ 1196 ರಲ್ಲಿ ನಿರ್ಮಿಸಲಾಯಿತು. ದೇವಸ್ಥಾನದ ವಾಸ್ತುಶಿಲ್ಪಿ ಅಮೃತೇಶ್ವರ ದಂಡನಾಯಕ ನ ಹಸರಿನಲ್ಲಿ ಇದನ್ನು ಹೆಸರಿಸಲಾಯಿತು. ಅಮೃತೇಶ್ವರ ದೇವಾಲಯ ಏಕಕೂಟ ವಿನ್ಯಾಸದ ವಿಮಾನ (ದೇವಾಲಯ), ವ್ಯಾಪಕವಾದ ತೆರೆದ ಮಂಟಪ (ಸಭಾಂಗಣ) ಮತ್ತು ಮುಕ್ತ ಹಾಲ್ ಅನ್ನು ಒಳಗೊಂಡ ಮುಚ್ಚಿದ ಮಂಟಪಗಳನ್ನು ಹೊಂದಿದೆ. ತೆರೆದ ಮಂಟಪ 29 ಕೊಲ್ಲಿಗಳನ್ನು ಹೊಂದಿದ್ದು, ಮುಚ್ಚಿದ ಮಂಟಪವು ಒಂದು ಮುಖಮಂಟಪದೊಂದಿಗೆ 9 ಕೊಲ್ಲಿಗಳನ್ನು ಹೊಂದಿದೆ. ಸ್ಥಳಕ್ಕೆ ಭೇಟಿ ನೀಡಿದಾಗ, ಭಕ್ತರು ದೇವಸ್ಥಾನದ ಕೀರ್ತಿಮುಖಗಳಿಂದ (ರಾಕ್ಷಸ ಮುಖಗಳು) ಅಲಂಕಾರಗೊಂಡಿರುವುದನ್ನು ಗುರುತಿಸಬಹುದು.
ಅಮೃತೇಶ್ವರ ದೇವಾಲಯದ ಮುಖ್ಯ ಆಕರ್ಷಣೆ ಮಂಟಪದ ಒಳಮಾಳಿಗೆಗೆ ಆಧಾರವಾಗಿರುವ ಲೇತ್ ನಿಂದ ಕೊರೆಯಲ್ಪಟ್ಟ ಹೊಳೆಯುವ ಸರಣಿ ಕಂಬಗಳು. ನಿಕಟವಾದ ಅವಲೋಕನ ಮಾಡಿದಲ್ಲಿ ಜನರು ಮಂಟಪ ಒಳ ಛಾವಣಿಯಲ್ಲಿ ಅಲಂಕರಿಸಲಾದ ಹೂವಿನ ನಮೂನೆಗಳ ಕೆತ್ತನೆಗಳನ್ನು ಕಾಣುತ್ತಾರೆ. ತೆರೆದ ಮಂಟಪ 140 ಫಲಕಗಳಲ್ಲಿ ಹಿಂದೂ ಪೌರಾಣಿಕ ಪಾತ್ರಗಳ ಪ್ರದರ್ಶನವನ್ನೂ ಒಳಗೊಂಡಿದೆ. ಗೋಡೆಯ ಉತ್ತರದಲ್ಲಿ ಪ್ರಮುಖವಾಗಿ ಮಹಾಭಾರತದ ಘಟನೆಗಳು ಮತ್ತು ಭಗವಾನ್ ಕೃಷ್ಣನ ಜೀವನವನ್ನು ತೋರಿಸಿದ್ದಾರೆ. ಮೇಲಾಗಿ, ರಾಮಾಯಣದ ಘಟನೆಗಳು ಗೋಡೆಯ ದಕ್ಷಿಣ ಭಾಗದಲ್ಲಿ ಅಪ್ರದಕ್ಷಿಣ ವಿಧಾನದಲ್ಲಿ ಪ್ರದರ್ಶಿಸಲಾಗಿದೆ. ಪ್ರವಾಸಿಗರು ಅಮೃತೇಶ್ವರ ದೇವಾಲಯದ ಸುತ್ತಮುತ್ತಲ ಭದ್ರಾ ನದಿ ಅಣೆಕಟ್ಟನ್ನು ವೀಕ್ಷಿಸಬಹುದು.