ಚಿಕ್ಕಬಳ್ಳಾಪುರ ಬಳಿಯಿರುವ ನಂದಿ ಬೆಟ್ಟದ ಭೋಗ ನಂದೀಶ್ವರ ದೇವಸ್ಥಾನಕ್ಕೆ ಪ್ರವಾಸಿಗರು ಭೇಟಿ ನೀಡಬಹುದು. ಸಮುದ್ರ ಮಟ್ಟದಿಂದ 4851 ಅಡಿ ಎತ್ತರದಲ್ಲಿರುವ ದ್ರಾವಿಡ ಶೈಲಿಯಲ್ಲಿರುವ ಈ ದೇವಸ್ಥಾನವನ್ನು ಕ್ರಿ.ಶ.806 ರಲ್ಲಿ ಬಾಣ ರಾಜವಂಶದ ರತ್ನವಲ್ಲಿ ಎಂಬುವರು ಕಟ್ಟಿಸಿದರೆನ್ನಲಾಗಿದೆ. ಈ ದೇವಸ್ಥಾನವನ್ನು ಯೋಗ ನರಸಿಂಹ ಮತ್ತು...
ಕಾಲವರ ದುರ್ಗವೆಂದೇ ಹೆಸರಾಗಿರುವ ಸ್ಕಂದಗಿರಿಯು ಚಿಕ್ಕಬಳ್ಳಾಪುರದ ಮತ್ತೊಂದು ಆಕರ್ಷಕ ತಾಣ. ಮೈಸೂರ ರಾಜ್ಯವನ್ನು ಆಳಿದ ಟಿಪ್ಪು ಸುಲ್ತಾನನ ಕಾಲದ ಹಿನ್ನೆಲೆ ಹೊಂದಿರುವ ನಂದಿಬೆಟ್ಟದ ವ್ಯಾಪ್ತಿಯಲ್ಲಿ ಬರುವ ಸ್ಕಂದಗಿರಿಯಲ್ಲಿನ ಕೋಟೆಯು 1350 ಮೀ ಉದ್ದವಿದೆ. ಇಲ್ಲಿ ಟಿಪ್ಪುಸುಲ್ತಾನ ಕಾಲದ ಅನೇಕ ಅವಶೇಷಗಳನ್ನು ಕಾಣಬಹುದು....
ಕ್ರಿ.ಶ.1350 ರಲ್ಲಿ ಗುಮ್ಮನಾಯಕನು ಚಿಕ್ಕಬಳ್ಳಾಪುರದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಆ ಕಾಲದಲ್ಲಿ ಕಟ್ಟಿದೆಯೆನ್ನಲಾದ ಕೋಟೆ ಇಂದಿಗೂ ಚಿಕ್ಕಬಳ್ಳಾಪುರದಲ್ಲಿ ಇದೆ. 150 ಅಡಿಯಷ್ಟು ಎತ್ತರವಾಗಿರುವ ಕೋಟೆಯ ಗೋಡೆಯು ದೊಡ್ಡದಾದ ಕಲ್ಲುಗಳಿಂದ ಸುಂದರವಾಗಿ ಕಟ್ಟಲ್ಪಟ್ಟಿದೆ.
ಚಿಕ್ಕಬಳ್ಳಾಪುರದಲ್ಲಿ ಭಾರತದ ಪ್ರಖ್ಯಾತ ಎಂಜಿನಿಯರ್ ಎಂದೇ ಹೆಸರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಗೌರವಾರ್ಥ ವಸ್ತುಸಂಗ್ರಹಾಲಯ ಸ್ಥಾಪಿಸಲಾಗಿದೆ. ಭೌಗೋಳಿಕ , ವೈಜ್ಞಾನಿಕ, ತಾಂತ್ರಿಕ, ಎಲೆಕ್ಟ್ರಾನಿಕ್, ಯಂತ್ರಗಳ ವಿಭಾಗಗಳು ಇಲ್ಲಿವೆ. ವಿವಿಧ ಅಂತಸ್ತುಗಳಲ್ಲಿ ಎಲ್ಲವನ್ನೂ ಹೊಂದಿಸಿಡಲಾಗಿದೆ.ಈ ವಸ್ತುಸಂಗ್ರಹಾಲಯ...
ಚಿಕ್ಕಬಳ್ಳಾಪುರದಿಂದ 7 ಕಿ.ಮೀ. ದೂರದಲ್ಲಿರುವ ಮುದ್ದೇನಹಳ್ಳಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ. ವಿಶ್ವೇಶ್ವರಯ್ಯನವರ ಜನಿಸಿದ ಮನೆಯಲ್ಲಿ ಇಂದು ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಈ ಮನೆಯಲ್ಲಿ ವಿಶ್ವೇಶ್ವರಯ್ಯನವರು ಬಳಸಿದ ವಸ್ತುಗಳು, ಬರೆದ ಕಾಗದಗಳು, ಅವರ ಫೋಟೋಗಳನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ.ದ್ರಾವಿಡರ...
ಇಲ್ಲಿಯ ಫಖಿ ಶಾಹ ವಲಿ ಅವರ ಮುರುಗುಮುಲ್ಲಾ ದರ್ಗಾವು ಕರ್ನಾಟಕದಲ್ಲಿಯ ಸುಫಿ ಮನೆತನದ ಪುರಾತನ ದರ್ಗಾಗಳಲ್ಲಿ ಒಂದಾಗಿದ್ದು ಭೇಟಿ ನೀಡಬಹುದಾದಂತಹ ಒಂದು ಸ್ಥಳವಾಗಿದೆ. ವಾರ್ಷಿಕವಾಗಿ ಜರುಗುವ ಉರುಸ್ ಉತ್ಸವದಂದು ಹಲವಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಭೀಮೇಶ್ವರ ದೇವಸ್ಥಾನವು ಮಹಾಭಾರತದ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಮಹಾಭಾರತ ಪುರಾಣದಲ್ಲಿ ಬರುವ ಪಂಚಪಾಂಡವರಲ್ಲಿ ಒಬ್ಬನಾದ ಭೀಮನು ರಾಕ್ಷಸ ಬಕಾಸುರರನ್ನು ಕೊಂದ ಸ್ಥಳ ಇದು ಎಂಬ ಪ್ರತೀತಿಯಿದೆ. ಭೀಮನ ಗೌರವಾರ್ಥವಾಗಿ ಈ ದೇವಸ್ಥಾನವನ್ನು ಕಟ್ಟಿಸಲಾಗಿದೆ ಎಂದು ಹೇಳಲಾಗುತ್ತದೆ.
ಚಿಕ್ಕಬಳ್ಳಾಪುರದಲ್ಲಿ ವಿಷ್ಣುವಿನ ಅವತಾರವೆಂದೇ ಪ್ರತೀತಿಯಿರುವ ಅಮರನಾರಾಯಣ ದೇವಸ್ಥಾನ ಹಿಂದೂ ಸಮಾಜ ಬಾಂಧವರಿಗೆ ಪೂಜ್ಯನೀಯ ಸ್ಥಳವಾಗಿದೆ. ಈ ದೇವಸ್ಥಾನವು ತನ್ನ ವಿಶೇಷ ಕಟ್ಟಡದಿಂದ ಗಮನ ಸೆಳೆಯುತ್ತದೆ. ಇಲ್ಲಿ ನವಗ್ರಹ ಮಂಟಪ ಮತ್ತು ಸುಂದರವಾದ ಚಿತ್ರಗಳಿಂದ ಚಿತ್ರಿತವಾದ ಗೋಡೆಗಳು ಅದ್ಭುತ ವಾಸ್ತುಶೈಲಿಗಳಿಂದ...
ಪೌರಾಣಿಕ ಹಿನ್ನೆಲೆಯಲ್ಲಿ ಏಕಚಕ್ರಾಪುರ ಎಂಬುದಾಗಿ ಗುರುತಿಸಿಕೊಂಡ ಕೈವಾರ ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿದೆ. ಮಹಾಭಾರತದ ಕಾಲದಲ್ಲಿ ಭೀಮನು ರಾಕ್ಷಸ ಬಕಾಸುರನ್ನು ಇದೇ ಸ್ಥಳದಲ್ಲಿ ಕೊಂದನೆಂಬ ಪ್ರತೀತಿ ಇದೆ. ಅಲ್ಲದೇ ರಾಕ್ಷಸ ಬಕಾಸು ವಾಸಿಸುತ್ತಿದ್ದನೆಂದು ನಂಬಲಾದ ಗುಹೆ ಕೂಡ ಇಲ್ಲಿದೆ. ಸ್ಥಳೀಯರ ಪ್ರಕಾರ ಶಿವರಾತ್ರಿ...