ತಿರುವೆಟ್ಕಾಲಂ ಎಂಬ ಸ್ಥಳವು ಒಂದು ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಈ ಸ್ಥಳದಲ್ಲಿ ಶಿವನು ಶಬರನ ( ಬೇಡ) ವೇಶದಲ್ಲಿ ಬಂದು ಅರ್ಜುನನ ಜೊತೆ ಯುದ್ಧ ಮಾಡಿ ಗೆದ್ದಿದ್ದನು. ಇದೇ ಸಂದರ್ಭದಲ್ಲಿ ಶಿವನು ಅರ್ಜುನನ ಬಿಲ್ಲನ್ನು ಮುರಿದು ಹಾಕಿದನು. ಇನ್ನೊಂದು ದಂತಕತೆಯ ಪ್ರಕಾರ ಅರ್ಜುನನು ಶಿವನಿಂದ ಪಾಶುಪತಾಸ್ತ್ರವನ್ನು ಇದೇ ತಿರುವೆಟ್ಕಾಲಂ ದೇವಾಲಯದ ಸ್ಥಳದಲ್ಲಿ ಪಡೆದನಂತೆ.
ಇಲ್ಲಿ ಶಿವನನ್ನು ಪಾಶುಪತೇಶ್ವರ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ದೇವಾಲಯವು ಪೂರ್ವಾಭಿಮುಖವಾಗಿ ನಿಂತಿದ್ದು, ಉದಯಿಸುವ ಸೂರ್ಯನನ್ನು ಇಲ್ಲಿಂದ ನೋಡಬಹುದು. ಈ ದೇವಾಲಯದ ಸುತ್ತಲು ಸುಂದರೇಶ್ವರ್, ಸಿದ್ಧಿ ವಿನಾಯಕರ್, ಸೋಮಸ್ಕಂದ ಮತ್ತು ಮಹಾಲಕ್ಷ್ಮೀ ದೇವಾಲಯಗಳಂತಹ ಸಣ್ಣ ಸಣ್ಣ ದೇವಾಲಯಗಳನ್ನು ನಾವು ನೋಡಬಹುದು. ತಮಿಳು ತಿಂಗಳು ವೈಕಾಶಿಯ ಸಮಯದಲ್ಲಿ ಇಲ್ಲಿ ಹಲವಾರು ಉತ್ಸವಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಇಲ್ಲಿ ಪಾಶುಪತಾಸ್ತ್ರದ ಕತೆಯನ್ನು ಆಡಲಾಗುತ್ತದೆ.
ಈ ದೇವಾಲಯವು ಚಿದಂಬರಂನಿಂದ 3 ಕಿ.ಮೀ ದೂರದಲ್ಲಿ, ಅನ್ನಾಮಲೈ ವಿಶ್ವ ವಿದ್ಯಾನಿಲಯದ ಕ್ಯಾಂಪಸ್ಗೆ ಸಮೀಪದಲ್ಲಿ ನೆಲೆಗೊಂಡಿದೆ.