ತಿಲ್ಲೈಕಾಳಿ ಅಮ್ಮನ್ ದೇವಾಲಯವು ಚಿದಂಬರಂ ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಕಾಳಿಕಾದೇವಿಯನ್ನು ಮುಖ್ಯದೇವತೆಯಾಗಿ ಪೂಜಿಸಲಾಗುತ್ತದೆ. ಈ ಮೂರ್ತಿಯ ನಾಲ್ಕು ಮುಖಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತವೆ. ದಂತಕತೆಗಳ ಪ್ರಕಾರ ಪಾರ್ವತಿದೇವಿಯು ಶಿವನ ಜೊತೆ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ? ಎಂಬ ವಾಗ್ವಾದಕ್ಕೆ ಇಳಿದು ಕ್ರೋಧೋನ್ಮಾದಳಾದಳಂತೆ.
ಹೀಗೆ ಕ್ರೋಧೋನ್ಮತ್ತಳಾದ ದೇವಿಯು ಕಾಳಿಕಾದೇವಿಯ ಅವತಾರವೆತ್ತಿದಳಂತೆ. ಕೊನೆಗೆ ಬ್ರಹ್ಮದೇವನು ತಪಸ್ಸು ಮಾಡಿ ಆಕೆಯನ್ನು ಶಾಂತಗೊಳಿಸಿದನಂತೆ. ಚಿದಂಬರಂನ ಮತ್ತೊಂದು ಹೆಸರು "ತಿಲ್ಲೈ" ಎಂದಿದೆ. ಏಕೆಂದರೆ ಇಲ್ಲಿ ಬೆಳೆದಿರುವ ತಿಲ್ಲೈ ಮರಗಳ ತೋಪುಗಳ ಸಲುವಾಗಿ ಈ ಹೆಸರು ಬಂದಿದೆ. ಹಾಗಾಗಿಯೇ ಈ ದೇವಾಲಯಗಳ ಪ್ರದೇಶಕ್ಕೆ "ತಿಲ್ಲೈ" ಎಂಬ ಹೆಸರು ಬಂದಿದೆ. ತಿಲ್ಲೈ ಕಾಳಿಯಮ್ಮನ್ ದೇವಾಲಯವು ತಿಲ್ಲೈ ನಟರಾಜಾರ್ ದೇವಾಲಯದಿಂದ ಉತ್ತರಕ್ಕೆ ನೆಲೆಗೊಂಡಿದೆ. ಇದು ನಟರಾಜರ್ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿರುವುದರಿಂದ ಸುಲಭವಾಗಿ ತಲುಪಬಹುದು.