ಅಣ್ಣಾಮಲೈ ವಿಶ್ವವಿದ್ಯಾನಿಲಯವು ತನ್ನ ಇಂಜಿನಿಯರಿಂಗ್, ಕಲೆ ಮತ್ತು ವಿಙ್ಞಾನ ಪಠ್ಯಕ್ರಮದಿಂದಾಗಿ ಹೆಸರುವಾಸಿಯಾಗಿದೆ. ಇದು ಉತ್ತಮ ಸೌಲಭ್ಯ ಹಾಗು ಉಪನ್ಯಾಸ ವೃಂದವನ್ನು ಹೊಂದಿದೆ. ಈ ವಿಚಾರವಾಗಿ ಇದು ದೇಶದ ವಿದ್ಯಾರ್ಥಿಗಳ ವಲಯದಲ್ಲಿ ಹೆಸರುವಾಸಿಯಾಗಿದೆ. ಅಣ್ಣಾಮಲೈ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಹಲವಾರು ಕಾಲೇಜುಗಳು ಅಂಗೀಕೃತಗೊಂಡಿವೆ.
ಈ ವಿಶ್ವವಿದ್ಯಾನಿಲಯವನ್ನು ರಾಜಾ ಸರ್ ಅಣ್ಣಾಮಲೈ ಚೆಟ್ಟಿಯಾರ್ ರವರು 1928ರಲ್ಲಿ ಸ್ಥಾಪಿಸಿದರು. ಇವರು ಮದ್ರಾಸ್ ರಾಜ್ಯಕ್ಕೆ ತಮ್ಮ ಸ್ವಾಧೀನದಲ್ಲಿದ್ದ ಭೂಮಿಯನ್ನು ಮತ್ತು ಶ್ರೀ ಮಹಾಲಕ್ಷ್ಮೀ ಕಾಲೇಜನ್ನು ದಾನವಾಗಿ ನೀಡಿದರು. ಮುಂದೆ ಇದು ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾನವಾಗಿ ಪರಿವರ್ತನೆಗೊಂಡಿತು. ಮುಂದೆ ಇವರಿಗೆ ಸರ್ಕಾರವು ವಿಶ್ವವಿದ್ಯಾನಿಲಯದ ಗೌರವ ಉಪ ಕುಲಪತಿ ಹುದ್ದೆಯನ್ನು ನೀಡಿ ಗೌರವಿಸಿತು. ಈ ಹುದ್ದೆಯಲ್ಲಿ ಅವರು ಇಪ್ಪತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಅಣ್ಣಾಮಲೈ ವಿಶ್ವವಿದ್ಯಾನಿಲಯವು ಶಾರ್ಜಾ, ಮಸ್ಕಟ್, ದುಬೈ ಮತ್ತು ಟೊರಾಂಟೊಗಳಂತಹ ಸ್ಥಳಗಳಲ್ಲಿ ಇದರ ಅಧ್ಯಯನ ಕೇಂದ್ರಗಳು ಇವೆ.
ಈ ವಿಶ್ವವಿದ್ಯಾನಿಲಯ ಕ್ಯಾಂಪಸ್ ಸುಮಾರು 1500 ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ಆವರಣದಲ್ಲಿ ಹಲವಾರು ವಿಭಾಗಗಳ ಕೇಂದ್ರವು ಮತ್ತು ವಿದ್ಯಾರ್ಥಿ ಹಾಗು ಉಪನ್ಯಾಸಕರ ವಸತಿ ನಿಲಯಗಳು ಇವೆ. ಇದು ತಿರುವೆಟ್ಕಲಂ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಚಿದಂಬರಂ ರೈಲ್ವೇ ನಿಲ್ದಾಣದಿಂದ ಇದು 2 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.