ಮಕ್ಕಳು ಹಾಗು ಯುವಜನರಿಗೆ ಯೋಗ್ಯವಾದ ತಾಣ ಚೆನ್ನೈನಲ್ಲಿರುವ ಕಿಷ್ಕಿಂತಾ ಮನರಂಜನೇಯ ಉದ್ಯಾನ. ತಾಂಬರಂ ರೈಲು ನಿಲ್ದಾಣದ ಸಮಿಪದಲ್ಲೆ ಇದನ್ನು ಕಾಣಬಹುದು. ನಿರ್ಜನ ಪ್ರದೇಶದಲ್ಲಿ ಕಟ್ಟಲಾಗಿರುವ ಈ ಉದ್ಯಾನ ಪ್ರಕೃತಿಯ ಜೊತೆಯಾಗಿರುವಂತಿದೆ. ಅನಕಪುತುರಿನ ದಕ್ಷಿಣದಿಂದ ಈ ಪಾರ್ಕ್ 13 ಕಿ.ಮೀ ದೂರದಲ್ಲಿದೆ.
ಪ್ರಕೃತಿ ವೈಭವ, ಸುಂದರ ದೃಶ್ಯಾವಳಿಗಳು, ಉಲ್ಲಾಸದಿಂದ ಪುಟಿಯುತ್ತಿರುವ ಕಾರಂಜಿಗಳು, ಹಸಿರು ಹಾಸುಗಳನ್ನು ಹೊತ್ತು ನಿಂತ ಈ ಮನರಂಜನಾ ಉದ್ಯಾನ ವಾರಾಂತ್ಯಗಳಂದು ಬಹುಸಂಖ್ಯೆಯಲ್ಲಿ ಪ್ರವಾಸಿಗರನ್ನು ಕಾಣುತ್ತದೆ. ಮನರಂಜನಾ ಉದ್ಯಾನವಾಗಿದ್ದರು ಕೂಡ ನೈಸರ್ಗಿಕ ಸೌಂದರ್ಯವನ್ನು ಹೊತ್ತಿರುವುದು ಇದರ ವಿಶೇಷತೆ.
ಮಕ್ಕಳಿಗೆ ಆಡಬೇಕೆಂದರೆ, ಬಂಪರ್ ಕಾರ್ ರೈಡ್, ಬಂಪಿ ಕ್ಯಾಟರ್ ಪಿಲ್ಲರ್ ರೈಡ್ ಗಳು, ಪುಟಾಣಿ ಟ್ರೇನ್, ಕೃತಕ ಅಲೆಗಳ ಕೊಳ ಸಜ್ಜಾಗಿರುತ್ತವೆ. ಇನ್ನು ಯುವಜನರಿಗಂತೂ ಈ ಎಲ್ಲ ರೈಡ್ ಗಳು ಹೆಚ್ಚಿನ ಗಾಢತೆಯಿಂದ ಕೂಡಿದ್ದು, ಸವಾಲೆಸೆಯುವ ಹಾಗಿರುತ್ತವೆ. ರೊಲರ್ ಕೋಸ್ಟರ್, ಟ್ವಿಸ್ಟರ್ ನಂತಹ ರೈಡ್ ಗಳು ಅದ್ಭುತ ಅನುಭವಗಳನ್ನು ಒದಗಿಸುತ್ತವೆ. ಇಷ್ಟಾದ ಮೇಲೆ ಹಸಿವಾಗುವುದು ಸಹಜವಾಗಿದ್ದರಿಂದ ಫುಡ್ ಕೋರ್ಟ್ ನಂತಹ ಉಪಹಾರಗೃಹಗಳು ವೈವಿಧ್ಯಮಯ ಖಾದ್ಯಗಳೊಂದಿಗೆ ನಿಮ್ಮನ್ನು ಸ್ವಾಗತಿಸಲು ರೆಡಿಯಾಗಿ ನಿಂತಿರುತ್ತದೆ.