ಜಾರ್ಖಂಡ್ ನ ಚತ್ರಾದ ಮುಖ್ಯ ಆಕರ್ಷಣೀಯ ಸ್ಥಳ ಈ ಬೆಟ್ಟಗಳ ಶ್ರೇಣಿಯಾಗಿದೆ. ಬೆಟ್ಟದ ತುದಿಯನ್ನು ತಲುಪಿದಾಗ, ಅಲ್ಲಿಂದ ಕಂಡುಬರುವ ದೃಶ್ಯ ಉಸಿರು ಬಿಗಿಹಿಡಿದು ನೋಡುವಷ್ಟು ಸುಂದರವಾಗಿದೆ. ವರ್ಷದಲ್ಲಿ 2 ಬಾರಿ ಕೊಲುವಾ ಮೇಳ ನಡೆಯುತ್ತದೆ. ಮಾಘ ವಸಂತ ಪಂಚಮಿ ಮತ್ತು ರಾಮ ನವಮಿಯಂದು ಇದನ್ನು ಆಚರಿಸಲಾಗುತ್ತದೆ.
ಬೆಟ್ಟದ ತುದಿಯಲ್ಲಿ ದೇವಸ್ಥಾನವೊಂದಿದ್ದು, ಕೌಲೇಶ್ವರಿ ದೇವಸ್ಥಾನವೆಂದು ಅದನ್ನು ಕರೆಯಲಾಗುತ್ತದೆ. ಈ ದೇವಸ್ಥಾನವನ್ನು ತಲುಪಲು ಭಕ್ತಾದಿಗಳು ಬೆಟ್ಟ ಹತ್ತಬೇಕು.