ರಾಜದರಿ ಮತ್ತು ದೇವದರಿ ಜಲಪಾತಗಳು ಚಂದ್ರಪ್ರಭಾ ಅಭಯಧಾಮದಲ್ಲಿ ಕಾಣಿಸುತ್ತವೆ. ಏಷಿಯಾದ ಸಿಂಹಗಳನ್ನು ಸಂರಕ್ಷಿಸಲು ಈ ಅಭಯಧಾಮವನ್ನು ನಿರ್ಮಿಸಲಾಗಿದೆ. ಈ ಅಭಯಧಾಮದಲ್ಲಿ ಪ್ರಾಣಿ ಪಕ್ಷಿಗಳ ಜೊತೆಗೆ ರಾಜದರಿ ಮತ್ತು ದೇವದರಿ ಜಲಪಾತಗಳು ಮುಖ್ಯ ಆಕರ್ಷಣೆ. ಸ್ಪಟಿಕ ಶುಧ್ದ ನೀರು ಕಲ್ಲು ಬಂಡೆಗಳ ಮಧ್ಯೆ ಹರಿಯುವುದರಿಂದ ನೋಡುವುದಕ್ಕೆ ಚಂದ. ಐತಿಹಾಸಿಕ ನಗರ ವಾರಣಾಸಿಯಿಂದ ಕೇವಲ 55ಕಿಮೀ ದೂರದಲ್ಲಿದೆ. ದಿನದ ಪ್ರವಾಸಕ್ಕೆಂದು ಇದು ಹೇಳಿಮಾಡಿಸಿದ ತಾಣವಾಗಿದ್ದು, ಜನರು ಬರುತ್ತಿರುತ್ತಾರೆ. ಆದರೆ ಯಾವುದೇ ವಸತಿ ಸೌಕರ್ಯವಿಲ್ಲ.