ಚಂದ್ರಪ್ರಭಾ ಅಭಯಧಾಮ ಒಂದು ಐತಿಹಾಸಿಕ ಕ್ಷೇತ್ರ. ವಾರಣಾಸಿಯಿಂದ 70 ಕಿ.ಮೀ ದೂರದಲ್ಲಿದೆ. ರಾಜದರಿ ಮತ್ತು ದೇವದರಿಯಂಥ ಜಲಪಾತಗಳು, ದಟ್ಟವಾದ ಅರಣ್ಯ ಹಾಗೂ ಹಲವು ಮನಮೋಹಕ ವಿಹಾರ ತಾಣಗಳು ಇಲ್ಲಿವೆ. ಏಷಿಯಾದ ಸಿಂಹಗಳನ್ನು ಸಂರಕ್ಷಿಸುವ ಸಲುವಾಗಿ 1957 ರಲ್ಲಿ ಈ ಅಭಯಧಾಮವನ್ನು ಸ್ಥಾಪಿಸಲಾಯಿತು. ಸಿಂಹಗಳ ಜೊತೆಗೆ ಬೇರೇ ಬೇರೇ ಪ್ರಭೇದದ ಪ್ರಾಣಿಗಳೂ ಇಲ್ಲಿವೆ. ಚೀತಲ್, ಬ್ಲ್ಯಾಕ್ ಬಕ್ಸ್, ವೈಲ್ಡ್ ಬೋರ್, ಸಾಂಬಾರ್, ನೀಲಘಾಯ್ ಮತ್ತು ಇಂಡಿಯನ್ ಗೇಜೇಲ್ ಗಳ ಇಲ್ಲಿ ಕಾಣಬಹುದಾಗಿದೆ. ಸುಮಾರು 150 ಸ್ಥಳೀಯ ಮತ್ತು ವಲಸೆ ಬರುವ ಪಕ್ಷಿಗಳು ಅಧ್ಯಯನಕಾರರಿಗೆ ಸೂಕ್ತ ವಾತಾವರಣ ಕಲ್ಪಿಸುತ್ತವೆ.
ವಿಂಧ್ಯ ಪರ್ವತದ ಸಾಲಿನಲ್ಲಿ ನೌಘರ್ ಮತ್ತು ವಿಜಯಘರ್ ಬೆಟ್ಟಗಳ ನಡುವೆ ಸುಮಾರು 78 ಸ್ಕ್ವೇರ್ ಕಿ.ಮೀ ವಿಸ್ತೀರ್ಣದಲ್ಲಿ ಈ ಅಭಯಧಾಮ ಹರಡಿಕೊಂಡಿದೆ. ಇಲ್ಲಿಗೆ ಭೇಟಿ ನೀಡುವುದಕ್ಕೆ ಅಕ್ಟೋಬರ್ ನಿಂದ ಫೇಬ್ರವರಿ ಸೂಕ್ತವಾದ ಸಮಯ. ಆದರೆ ಇಲ್ಲಿ ಯಾವುದೇ ವಸತಿ ಸೌಕರ್ಯಗಳಿಲ್ಲ. ತಿಂಡಿ ತಿನಿಸು ಪಾನೀಯದ ಅಂಗಡಿಗಳಿವೆ.