ಚಂಬಲ್ ವನ್ಯಧಾಮದಲ್ಲಿ ಪ್ರಾಣಿ- ಪಕ್ಷಿಗಳನ್ನು ನೋಡುವುದರ ಜೊತೆಗೆ ಯಮುನಾ ನದಿ ತೀರದಲ್ಲಿರುವ ಬಾತೇಶ್ವರ್ ದೇವಾಲಯಗಳನ್ನು ಸಹ ನೋಡಬಹುದು. ಈ ಸಂಕೀರ್ಣವು ಸುಮಾರು ನೂರಕ್ಕು ಹೆಚ್ಚಿನ ಈಶ್ವರನ ದೇವಾಲಯಗಳನ್ನು ಹೊಂದಿದೆ. ನಂಬಿಕೆಗಳ ಪ್ರಕಾರ ಬಾತೇಶ್ವರ್ ಎಂಬುದು ಭಗವಾನ್ ಶ್ರೀ ಕೃಷ್ಣನ ಜನ್ಮ ಸ್ಥಳವಂತೆ. ಹಾಗಾಗಿ ಇದಕ್ಕೆ ಸಂಬಂಧಿಸಿದ ಕೆಲವು ನಂಬಿಕೆಗಳು ಮತ್ತು ದಂತಕತೆಗಳು ಚಾಲ್ತಿಯಲ್ಲಿವೆ.
ಈ ದೇವಾಲಯ ಸಂಕೀರ್ಣಗಳಿಗೆ ಹೊಂದಿಕೊಂಡ ಎತ್ತರವಾದ ಕೊರಕಲುಗಳಲ್ಲಿರುವ ಮಣ್ಣಿನ ಮನೆಗಳಲ್ಲಿ ಮತ್ತು ಗುಹೆಗಳಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ನಾಗಾ ಸಾಧುಗಳು ವಾಸವಾಗಿದ್ದಾರೆ.ಯಮುನಾ ನದಿ ಮತ್ತು ಅದರ ಸುತ್ತ- ಮುತ್ತಲ ಪ್ರದೇಶದಲ್ಲಿ ಪೆಲಿಕಾನ್ ಮತ್ತು ಮಿಂಚುಳ್ಳಿಗಳಂತಹ ದೇಶೀಯ ಮತ್ತು ವಿದೇಶಿ ವಲಸೆ ಹಕ್ಕಿಗಳು ಆಶ್ರಯವನ್ನು ಪಡೆದಿವೆ.
ಈ ದೇವಾಲಯದ ಹೊರ ಪ್ರಾಂಗಣದಲ್ಲಿ ನವೆಂಬರ್ ತಿಂಗಳಿನಲ್ಲಿ ವಾರ್ಷಿಕ ಪ್ರಾಣಿಗಳ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಈ ಪ್ರಾಂತ್ಯದಲ್ಲಿರುವ ಸಾಧುಗಳನ್ನು, ಸಂತರನ್ನು, ವರ್ತಕರನ್ನು ಮತ್ತು ಹಳ್ಳಿ ಜನರನ್ನು ಆಕರ್ಷಿಸುತ್ತದೆ.