ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ನಗರವು ಇಲ್ಲಿನ ಸಮುದ್ರ ತೀರಗಳಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೈಂದೂರು ನಗರದಿಂದ ಪ್ರಸಿದ್ಧ ಮರವಂತೆ ಸಮುದ್ರ ತೀರ 45 ಕಿ.ಮೀ. ದೂರದಲ್ಲಿದೆ. ಬೈಂದೂರು ಸಮುದ್ರ ತೀರವು ಇಲ್ಲಿನ ಸೂರ್ಯಾಸ್ತದ ಸುಂದರ ಸಂಜೆಗೆ ಹೆಸರುವಾಸಿಯಾಗಿದೆ. ಇಲ್ಲಿ ಸೂರ್ಯಾಸ್ತ ನೋಡಲೆಂದೇ ಎಲ್ಲೆಡೆಯಿಂದ ಪ್ರವಾಸಿಗರು ಬಂದಿರುತ್ತಾರೆ.ಬೈಂದು ಎಂಬ ಸಂತ ಒತ್ತಿನಾನೆ ಎಂಬ ಗುಡ್ಡದ ಪ್ರದೇಶದಲ್ಲಿ ದೈವಿ ಸಾಧನೆ ಮಾಡಿದನೆನ್ನಲಾದ ಈ ಪ್ರದೇಶ ಹಲವಾರು ಪ್ರವಾಸಿಗರಿಗೆ ಮನ ಮೆಚ್ಚುವ ತಾಣವಾಗಿದೆ. ಪ್ರಶಾಂತವಾದ ಈ ಸುಂದರ ಗುಡ್ಡ ಪ್ರದೇಶದಲ್ಲಿ ಎಲ್ಲ ಪ್ರವಾಸಿಗರು ಭಕ್ತಿಭಾವದೊಂದಿಗೆ ಪ್ರಕೃತಿ ಸೌಂದರ್ಯವನ್ನೂ ಕೂಡ ಸವಿಯಬಹುದಾಗಿದೆ.ದೇವಿ ಪಾರ್ವತಿಯ ಅವತಾರವೆಂದು ಪ್ರಸಿದ್ಧಿ ಹೊಂದಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಬೈಂದೂರಿಗೆ ಹತ್ತಿರದಲ್ಲಿದೆ. ಅದ್ವೈತ ಸಿದ್ಧಾಂತದ ಆದಿ ಶಂಕರಾಚಾರ್ಯರ ಹಿನ್ನೆಲೆಯುಳ್ಳ ಈ ದೇವಸ್ಥಾನಕ್ಕೆ ಹಲವಾರು ಪ್ರವಾಸಿಗರು ಮತ್ತು ಭಕ್ತರು ಭೇಟಿ ನೀಡುತ್ತಾರೆ. ಇದಲ್ಲದೆ ಬೈಂದೂರು ಗುಡ್ಡ, ಮುರ್ಡೇಶ್ವರ, ಮರವಂತೆ ಮತ್ತು ಒತ್ತಿನಾನೆ ಇನ್ನಿತರ ಪ್ರೇಕ್ಷಣಿಯ ಸ್ಥಳಗಳು.