ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ನಗರವು ಇಲ್ಲಿನ ಸಮುದ್ರ ತೀರಗಳಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೈಂದೂರು ನಗರದಿಂದ ಪ್ರಸಿದ್ಧ ಮರವಂತೆ ಸಮುದ್ರ ತೀರ 45 ಕಿ.ಮೀ. ದೂರದಲ್ಲಿದೆ. ಬೈಂದೂರು ಸಮುದ್ರ ತೀರವು ಇಲ್ಲಿನ ಸೂರ್ಯಾಸ್ತದ ಸುಂದರ ಸಂಜೆಗೆ ಹೆಸರುವಾಸಿಯಾಗಿದೆ. ಇಲ್ಲಿ...
ಬೈಂದೂರಿನ ಸೋಮೇಶ್ವರ ದೇವಸ್ಥಾನವು ಇಲ್ಲಿ ಪ್ರಾಚೀನ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನವು ಅರಬ್ಬೀ ಸಮುದ್ರ ತೀರದಲ್ಲಿ ಬೈಂದೂರು ನದಿಯು ಸಮುದ್ರಕ್ಕೆ ಸೇರುವ ಸ್ಥಳದಲ್ಲಿದೆ. ಈ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿಯು ಇದ್ದು ಭಕ್ತರ ಇಷ್ಟಾರ್ಥ ಈಡೇರಿಸುತ್ತದೆ ಎಂಬ ಪ್ರತೀತಿ ಇದೆ.
ಇಲ್ಲಿರುವ ಶನೀಶ್ವರ ದೇವಸ್ಥಾನಕ್ಕೆ ವರ್ಷವಿಡೀ ಹಲವಾರು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ದೇವಸ್ಥಾನವು ಅತ್ಯಂತ ಪುರಾತನವಾಗಿದ್ದು ಹಲವು ಶತಮಾನಗಳಷ್ಟು ಹಳೆಯದೆಂದು ನಂಬಲಾಗಿದೆ.
ಸಮುದ್ರವು ಆಕಾಶದೊಂದಿಗೆ ಜೋಡಿಕೊಂಡಂತೆ ರಮಣೀಯವಾಗಿ ಕಾಣುವ ಕ್ಷಿತಿಜ ನೇಸರ ಧಾಮವು ಇಲ್ಲಿದೆ. ಗುಡ್ಡದ ಮೇಲಿರುವ ಈ ಧಾಮವು ಅರಬ್ಬೀ ಸಮುದ್ರದ ಸುಂದರ ನೋಟದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜ್ಯ ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿರುವ ಈ ಧಾಮದಲ್ಲಿ ವಸತಿ ವ್ಯವಸ್ಥೆಗೆ ಬಾಡಿಗೆಗೆ ರೂಮುಗಳು ಸಿಗುತ್ತವೆ. ಅರಣ್ಯ ಇಲಾಖೆಯೇ...
ಬೈಂದೂರ ಸಮೀಪವಿರುವ ಬೆಲಕ ತೀರ್ಥ ಜಲಪಾತ ಒತ್ತೀನೇನಿ ಗುಡ್ಡದ ಬಳಿ ಇದೆ. ಚಾರಣ ಪ್ರಿಯರಿಗೆ ಸೂರ್ಯಾಸ್ತದ ಸುಂದರ ದೃಶ್ಯಗಳನ್ನು ನೋಡುವ ಪ್ರವಾಸಿಗರಿಗೆ ಇದೊಂದು ನಯನ ಮನೋಹರ ತಾಣವಾಗಿದೆ.
ಬೈಂದೂರಿನ ಮತ್ತೊಂದು ಪ್ರಸಿದ್ಧ ಧಾರ್ಮಿಕ ಸ್ಥಳವೆಂದರೆ ಶ್ರೀ ರಾಮಚಂದ್ರ ಮಂದಿರ. ವರ್ಷಪೂರ್ತಿ ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಪೌರಾಣಿಕ ಹಿನ್ನೆಲೆಯಲ್ಲಿ ಕೃಷ್ಣನ ಅವತಾರವೆಂದೇ ಹೇಳಲಾಗುವ ಶ್ರೀರಾಮಚಂದ್ರ ದೇವರನ್ನು ಇಲ್ಲಿ ಪೂಜಿಸಲಾಗುತ್ತದೆ.
ಬೈಂದೂರಿನಲ್ಲಿನ ಮಹಾಕಾಳಿ ದೇವಸ್ಥಾನವು ಸುಮಾರು 300 ವರ್ಷಗಳ ಹಳೆಯದ್ದು ಎನ್ನಲಾಗಿದೆ. ಚಿತ್ರಾಪುರ ಸಾರಸ್ವತ ಕುಟುಂಬವು ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿದೆ.