ಸುಖ ಮಹಲ್ ಜೈತ್ ಸಾಗರ ಕೆರೆಯ ದಡದಲ್ಲಿದೆ. ಇದನ್ನು ಉಮ್ಮೇದ್ ಸಿಂಗ್ ನಿರ್ಮಿಸಿದ್ದರು. ಇದು ರುಡ್ಯಾರ್ಡ್ ಕಿಪ್ಲಿಂಗ್ರ ಮನೆಯಾಗಿತ್ತು ಮತ್ತು ಅವರಿಗೆ “ಕಿಮ್” ಕೃತಿಯನ್ನನು ಬರೆಯುವುದಕ್ಕೆ ಸ್ಫೂರ್ತಿಯಾಗಿತ್ತು. ಇದನ್ನು ಈಗ ನೀರಾವರಿ ಗೃಹವಾಗಿ ಮಾರ್ಪಡಿಸಲಾಗಿದೆ. ಸುಖ ಮಹಲ್ನ ಎರಡನೇ ಮಹಡಿಯಲ್ಲಿ ಬಿಳಿ ಕಲ್ಲಿನಿಂದ ಛತ್ರಿ ಅಥವಾ ಕೊಡೆಯನ್ನು ಮಾಡಲಾಗಿದೆ. ಇಲ್ಲಿ ಸುಮಾರು 66ಕ್ಕೂ ಹೆಚ್ಚು ಮೂರ್ತಿಗಳಿದ್ದು, ಇವೆಲ್ಲವೂ ಮಾರ್ಬಲ್ ಕಲ್ಲಿನಿಂದ ಮಾಡಲಾಗಿದೆ.