ಬೆಲೋನ್ ಮಂದಿರ ಬೆಲೋನ್ ಹಳ್ಳಿಯಲ್ಲಿದ್ದು, ಇದು ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ. ಈ ದೇವಾಲಯವು ಸರ್ವಮಂಗಳ ದೇವಿಗೆ ಅರ್ಪಿತವಾಗಿದೆ, ಈ ದೇವಿ ಉತ್ತಮ ಸ್ವಾಸ್ಥ್ಯ ನೀಡುತ್ತಾಳೆ ಎನ್ನುವುದು ನಂಬಿಕೆ. ಇಲ್ಲಿಗೆ ಭಕ್ತಾದಿಗಳು ನಡೆದುಕೊಂಡು ಬಂದು ದೇವಿಯ ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ.
ಪುರಾಣದ ಕಥೆಗಳ ಪ್ರಕಾರ, ಅನುಪ್ ಶಹರ್ ಪ್ರದೇಶವನ್ನು ಬರ್ಗುಜಾರ್ ರಾಜಾ ಅನುಪ್ ರೈ 1605 ರಿಂದ 1628 ಮಧ್ಯೆ ಆವಿಷ್ಕರಿಸಿದ. ಈ ನಗರದ ಆವಿಷ್ಕಾರಕವನ್ನು ತಾಳೆ ಹಾಕಿದರೆ ಮೊಘಲರ ದೊರೆ ಜಹಾಂಗೀರ್ ಕಾಲಕ್ಕೆ ಹೋಲುತ್ತದೆ. ಇತಿಹಾಸದ ಪ್ರಕಾರ, ಅನುಪ್ ರೈ, ಒಂದೊಮ್ಮೆ ಹುಲಿಯಿಂದ ಸಾಮ್ರಾಟ ಜಹಾಂಗೀರನ ಪ್ರಾಣ ಉಳಿಸಿದ. ಇದರಿಂದ...
ಸಿಕಂದರಾಬಾದ್ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದ್ದು, ರಾಜ್ಯದ ಪ್ರಮುಖ ನಗರಗಳಿಗೆ, ಜಿಲ್ಲೆಗಳೊಂದಿಗೆ ಉತ್ತಮ ಸಂಪರ್ಕದಲ್ಲಿದೆ. ಈ ಐತಿಹಾಸಿಕ ನಗರವನ್ನು ಸಿಕಂದರ್ ಲೋಧಿ 1498 ರಲ್ಲಿ ನಿರ್ಮಿಸಿದ. ಈ ಪ್ರದೇಶವು ಪುರಾತನ ಸ್ಮಾರಕವನ್ನು ಹೊಂದಿದ್ದು ಅದರಲ್ಲಿ ಪ್ರಮುಖವಾಗಿ ಚಿಸ್ತಿ ಸಾಹೇಬ್ ಕೂಡಾ ಒಂದು....
ಚೋಳ ಒಂದು ಪುಟ್ಟ ಹಳ್ಳಿಯಾಗಿದ್ದು ಬುಲಂದ್ ಶಹರ್ ಜಿಲ್ಲೆಯಲ್ಲಿದೆ. ಈ ಹಳ್ಳಿ ಪ್ರಮುಖವಾಗಿ ಗಮನ ಸೆಳೆಯುವುದು ರಷ್ಯಾ ಸಹಭಾಗಿತ್ವದ ಬಿಬ್ಕೋಲ್ ಪೋಲಿಯೋ ದನದ ಸಿಡುಬಿನ ಲಸಿಕೆಯ ಕಾರ್ಖಾನೆಗೆ. ಬಿಬ್ಕೋಲ್ ಕಾರ್ಖಾನೆ 1989 ರಲ್ಲಿ ದನದ ಲಸಿಕೆಯನ್ನು ಉತ್ಪಾದಿಸಲು ಆರಂಭಿಸಿತು, ಇದು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಕ್ಕನುಗುಣವಾಗಿ...
ಗಂಗಾನದಿ ತಟದಲ್ಲಿರುವ, ಬುಲಂದ್ ಶಹರ್ ವ್ಯಾಪ್ತಿಗೆ ಬರುವ ಈ ಸಣ್ಣ ಪಟ್ಟಣ ಆವಂತಿಕಾ ದೇವಿಯ ಮತ್ತು ಶಿವ ದೇವರ ಗುಡಿಗೆ ಹೆಸರುವಾಸಿ. ವರ್ಷದ ಎಲ್ಲಾ ದಿನಗಳಲ್ಲೂ ಈ ದೇವಾಲಯ ಭಕ್ತರನ್ನು ಆಕರ್ಷಿಸುತ್ತದೆ. ಅದರಲ್ಲೂ ಶಿವರಾತ್ರಿ ಮತ್ತು ನವರಾತ್ರಿಯ ಸಮಯದಲ್ಲಿ ಇನ್ನೂ ಹೆಚ್ಚಿನ ಭಕ್ತಾದಿಗಳನ್ನು ಆಕರ್ಷಿಸುತ್ತದೆ.
ಗಂಗಾನದಿ...
ವಾಲಿಪುರ ಎನ್ನುವ ಸಣ್ಣ ಹಳ್ಳಿ ಗಂಗಾ ನದಿಯ ತಟದಲ್ಲಿದೆ. ಇದು ವನ್ ಚೇತನ್ ಕೇಂದ್ರಕ್ಕೂ ಹೆಸರುವಾಸಿಯಾಗಿದ್ದು, ಇದು ಸಮೀಪದಲ್ಲಿದೆ. ಇದನ್ನು ರಾಜ್ಯ ಸರಕಾರ ಉಸ್ತುವಾರಿ ವಹಿಸಿಕೊಂಡಿದೆ.