ಪ್ರಯಾಣಿಕರು ಬಿಳಗಿರಿ ರಂಗನ ಬೆಟ್ಟಕ್ಕೆನಾದರು ಪ್ರವಾಸ ಹೋದರೆ, ಬೆಟ್ಟದ ತುದಿಯಲ್ಲಿರುವ ಬಿಳಗಿರಿ ರಂಗಸ್ವಾಮಿ ದೇವಸ್ಥಾನಕ್ಕೆ ಖಂಡಿತವಾಗಿಯೂ ಭೇಟಿ ನೀಡಬೇಕು. ಈ ದೇವಸ್ಥಾನವು ವೆಂಕಟೇಶ ದೇವರಿಗೆ ಸಮರ್ಪಿತವಾಗಿದೆ. ಈ ಒಂದು ದೇವಸ್ಥಾನದಲ್ಲಿ ರಂಗನಾಥ ದೇವರ ವಿಗ್ರಹವು ನಿಂತ ಭಂಗಿಯಲ್ಲಿದ್ದು, ಬೇರೆ ಯಾವ ದೇವಸ್ಥಾನದಲ್ಲೂ ಈ ರೀತಿ ಕಾಣಸಿಗದು ಎಂದು ಹೇಳಬಹುದಾಗಿದೆ. ಇಲ್ಲಿ ರಂಗನಾಥನ ವಿಗ್ರಹದ ಜೊತೆ ಅವನ ಪತ್ನಿಯಾದ ರಂಗನಾಯಕಿಯ ವಿಗ್ರಹವನ್ನೂ ಕಾಣಬಹುದು. ಪ್ರತಿ ಶುಕ್ರವಾರದಂದು ಇಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.ಈ ಪ್ರದೇಶದ ಶ್ರೀವೈಷ್ಣವರಿಗೆ ಈ ದೇವಸ್ಥಾನವು ಮಹತ್ವದ್ದಾಗಿದ್ದು, ಸ್ಥಳೀಯರು ಚರ್ಮದ ಪಾದುಕೆ (1ಅಡಿ 9 ಇಂಚು ಉದ್ದದ)ಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ದೇವರಿಗೆ ಅರ್ಪಿಸುತ್ತಾರೆ. ಪ್ರತಿ ಎಪ್ರಿಲನ 'ವೈಶಾಖ'ದಂದು ಇಲ್ಲಿ ಜರುಗುವ ರಥೋತ್ಸವವು ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ.