ವಾಲ್ಮೀಕಿ ಆಶ್ರಮ, ಋಷಿ ವಾಲ್ಮೀಕಿ ಮಹಾಕಾವ್ಯ ರಾಮಾಯಣವನ್ನು ರಚಿಸಿದ ತಾಣ ಎಂದು ನಂಬಲಾಗಿದೆ. ಇದು ಸೀತೆ ಗಡಿಪಾರಾಗಿ ನಂತರ ಇಲ್ಲಿಯೇ ಉಳಿದು ತನ್ನ ಅವಳಿ ಮಕ್ಕಳಾದ ಲವ ಮತ್ತು ಕುಶರಿಗೆ ಜನ್ಮವಿತ್ತ ಸ್ಥಳವಾಗಿದೆ. ಅಲ್ಲದೇ ಈ ಮಕ್ಕಳು ತಮ್ಮ ಬಾಲ್ಯವನ್ನು ಇಲ್ಲಿಯೇ ಕಳೆದರು ಮತ್ತು ಮಹಾನ್ ಋಷಿಯ ಮೂಲಕ ಯುದ್ಧ ಮತ್ತು ರಾಜಕೀಯ ತರಬೇತಿಯನ್ನು ಪಡೆದ ಸ್ಥಳ ಇದಾಗಿದೆ.
ಆಶ್ರಮ ಅತ್ಯಂತ ಎತ್ತರದಲ್ಲಿದೆ ಮತ್ತು ಇದನ್ನು ತಲುಪಲು, ನೀವು 'ಸ್ವರ್ಗಕ್ಕೆ ಮೆಟ್ಟಿಲು.' ಎಂದು ಕರೆಯಲಾಗುವ ಮೆಟ್ಟಿಲುಗಳನ್ನು ಏರಬೇಕು. ನೀವು ಸ್ಥಳದ ಸುತ್ತಮುತ್ತಲಿನಲ್ಲಿ ಸೌಂದರ್ಯದ ಪಕ್ಷಿನೋಟವನ್ನು ಆನಂದಿಸಬಹುದು.