ಇದು ಐದು ಶಿಖರಗಳ ಟೆರ್ರಾಕೊಟ್ಟಾ ದೇವಾಲಯ. ಇದನ್ನು 1600ರಲ್ಲಿ ಮಹಾರಾಜ ರಘುಬೀರ್ ಸಿಂಗನು ಕಟ್ಟಿಸಿದನು. ಈ ರೀತಿಯ ಶಿಖರಗಳು ಸುತ್ತಮುತ್ತಲ ಯಾವ ದೇಗುಲಗಳಲ್ಲೂ ಕಂಡುಬರುವುದಿಲ್ಲವಾದ್ದರಿಂದ ಇದಕ್ಕೆ ವಿಶಿಷ್ಟ ಕಳೆಯನ್ನು ತಂದುಕೊಟ್ಟಿದೆ. ಈ ದೇಗುಲದ ಗೋಡೆಗಳ ಮೇಲೆ ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಕೆತ್ತಲಾಗಿದೆ.