ಬಿರ್ಭುಂ ಜಿಲ್ಲೆ ಜಾರ್ಖಂಡ್ ರಾಜ್ಯದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ ಮತ್ತು ಇದನ್ನು ಕೆಂಪು ಮಣ್ಣಿನ ಭೂಮಿ ಎಂದೇ ಕರೆಯಲಾಗುತ್ತದೆ. ಇದು ತನ್ನ ವ್ಯಾಪ್ತಿಯಲ್ಲಿ ಕೆಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗಳಿಕೆ ಹೊಂದಿರುವ ಸ್ಥಳಗಳನ್ನು ಹೊಂದಿದೆ ಮತ್ತು ಇದು ಟೆರಕೋಟ ರಚನೆಗಳಿಂದಾಗಿ ವಿವಿಧ ನಗರಗಳಿಗೆ ಹೆಸರುವಾಸಿಯಾಗಿದೆ.
ಸ್ಥಳೀಯ ಕೈಗಾರಿಕೆಗಳು
ಈ ಜಿಲ್ಲೆಯ ಮುಖ್ಯ ಆದಾಯ ಕೃಷಿಯಿಂದ ಬರುತ್ತಿದ್ದು ಇಲ್ಲಿನ ಶೇಖಡ 75 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಪ್ರವಾಸಿಗರು ಬಿರ್ಭುಮ್ ಹೋಗುವ ದಾರಿಯಲ್ಲಿ ಸುತ್ತಲೂ ಸಾಕಷ್ಟು ಕೃಷಿ ಭೂಮಿಯನ್ನು ಕಾಣಬಹುದು ಮತ್ತು ಧಾನ್ಯಗಳು, ತಾಜಾ ತರಕಾರಿಗಳನ್ನು ಕೊಂಡುಕೊಳ್ಳಬಹುದು. ಪ್ರವಾಸಿಗರು ಅಲ್ಲಿ ಮೆಟಲ್ ಮತ್ತು ಪಾಟ್ ಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳಿಗೆ ಕೂಡ ಭೇಟಿ ನೀಡಬಹುದು.
ಬಿರ್ಭುಂ ನ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳು
ಬಿರ್ಭುಂ ಜಿಲ್ಲೆಯಲ್ಲಿ ಪ್ರಸಿದ್ಧ ಪುಷ ಮೇಳ ಆಚರಿಸಲಾಗುತ್ತದೆ ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಆಗಮಿಸುತ್ತಾರೆ. ಇಲ್ಲಿನ ಇತರ ಧಾರ್ಮಿಕ ಆಕರ್ಷಣಾ ಸ್ಥಳಗಳೆಂದರೆ ತಾರಾಪೀಠ, ಬಿಸಿನೀರಿನ ಬುಗ್ಗೆ ಇರುವ ಬಕ್ರೇಶ್ವರ ಮತ್ತು ದುಬ್ರಾಜಪುರ ದೇವಾಲಯದ ಪಟ್ಟಣ.
ಬಿರ್ಭುಂ ವನ್ಯಜೀವಿ ತಾಣ
ಬಲ್ಲಾಪುರ ವನ್ಯಜೀವಿ ಅಭಯಾರಣ್ಯ ಪ್ರಸಿದ್ಧ ತಾಣವಾಗಿದ್ದು ಪ್ರಕೃತಿ ಮತ್ತು ಪ್ರಾಣಿ ಪ್ರಿಯರಿಗೆ ಸೂಕ್ತ ಸ್ಥಳ. ಇಲ್ಲಿ ಗುಳ್ಳೆ ನರಿಗಳು, ನರಿಗಳು, ಚುಕ್ಕೆಗಳಿರುವ ಜಿಂಕೆಗಳು, ಬ್ಲಾಕ್ ಬಕ್ಸ್ ಮತ್ತು ವಿವಿಧ ಪಕ್ಷಿಗಳನ್ನು ಕಾಣಬಹುದು.
ಸಾಮಾನ್ಯವಾಗಿ, ಬೀರ್ಭಮ್ ಸಾಮಾನ್ಯ ಪಕ್ಷಿಗಳಿಂದ ವಲಸೆ ಬರುವ ಅಪರೂಪ ಪಕ್ಷಿಗಳಾದ ವಿರಳ ಗಿಳಿಗಳು,ವಿವಿಧ ತಳಿಯ ಪಾರಿವಾಳಗಳನ್ನು ಹೊಂದಿವೆ.
ಕ್ರೀಡೆ ಮತ್ತು ಸುತ್ತಮುತ್ತಲ ಸ್ಥಳಗಳು
ಇಲ್ಲಿನ ಸ್ಥಳೀಯ ಕ್ರೀಡೆಯಾದ ದಾಂಗುಲಿ ಎಂದರೆ ಚೆಂಡು ಮತ್ತು ಕೋಲಿನ ಮೂಲಕ ಆಡುವ ಆಟ ಕಾಣಬಹುದು. ಬಿರ್ಭುಂ ನಲ್ಲಿ ಸಾರಿಗೆ ವ್ಯವಸ್ಥೆ ಅನುಕೂಲಕರವಾಗಿದ್ದು ಸುಲಭವಾಗಿ ಬಸ್ಸು,ಆಟೋ, ಖಾಸಗಿ ಕಾರಿನ ಮೂಲಕ ಹಳ್ಳಿ ಮತ್ತು ನಗರದಲ್ಲಿ ಪ್ರವಾಸ ಕೈಗೊಳ್ಳಬಹುದು.