ಖುತಾಘಾಟ್ ಸುಂದರವಾದ ಜಲಾಶಯ ಮತ್ತು ಅಣೆಕಟ್ಟಾಗಿದ್ದು ಬಿಲಾಸಪುರದ ಹತ್ತು ಕಿಲೋಮೀಟರ್ ದೂರದ ರತ್ನಾಪುರ ಎನ್ನುವಲ್ಲಿದೆ. ಇದು ಬಿಲಾಸಪುರ - ಅಂಬಿಕಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ, ಈ ಪ್ರದೇಶವನ್ನು ಪ್ರವಾಸಿಗರು ನಿರಾಯಾಸವಾಗಿ ತಲುಪಬಹುದಾಗಿದೆ. ಅರಣ್ಯ ಮತ್ತು ಬೆಟ್ಟಗಳು ಕಹುತಘಾಟ್ ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರಗೊಳಿಸುತ್ತದೆ.
ನೈಸರ್ಗಿಕ ಸೌಂದರ್ಯ ಇಲ್ಲಿನ ಆಕರ್ಷಣೆ. ನೀರಾವರಿ ಇಲಾಖೆಯ ಅಧೀನದಲ್ಲಿರುವ ರೆಸ್ಟ್ ಹೌಸ್ ಅಣೆಕಟ್ಟಿನ ಹತ್ತಿರದಲ್ಲಿದೆ, ಇದನ್ನು ಪ್ರವಾಸಿಗರು ನೋಡಬಹುದಾಗಿದೆ. ರೆಸ್ಟ್ ಹೌಸ್ ಮುನ್ನೋಟಕ್ಕೆ ನೀಲಿ ನೀರನ್ನು ಜಲಾಶಯದಲ್ಲಿ ಹೊಂದಿದ್ದು ಪ್ರವಾಸಿಗರ ಕಣ್ತುಂಬಿಸುತ್ತದೆ.
ಮೂಲವಾಗಿ 1926ರಲ್ಲಿ ಇದು ಕೊಳವಾಗಿತ್ತು, ಇದನ್ನು ಬ್ರಿಟಿಷರು ನಿರ್ಮಿಸಿದ್ದರು. ಇದು ಬಿಸ್ಲಾಪುರದಿಂದ 55 ಕಿಲೋಮೀಟರ್ ದೂರದಲ್ಲಿದೆ. ಖರೋನ್ ನದಿಗೆ ಇದನ್ನು ಕಟ್ಟಲಾಗಿದ್ದು, ಇದನ್ನು ನೀರಾವರಿಗಾಗಿ ಬಳಸಿಕೊಳ್ಳಲಾಗುತ್ತದೆ. ಇತ್ತೀಚೆಗೆ ಸ್ಥಳೀಯ ನಿವಾಸಿಗಳು ಕೂಡಾ ಇಲ್ಲಿಗೆ ಪಿಕ್ನಿಕೆಗೆ ಬರುತ್ತಾರೆ. ರಾಯಪುರ ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ, ಬಿಸ್ಲಾಪುರ ಹತ್ತಿರದ ರೈಲು ನಿಲ್ದಾಣ.