ರೇವನ್ಶಾ ಕಾಲೇಜಿನ ಇಬ್ಬರು ಶ್ರೇಷ್ಠ ಇತಿಹಾಸಕಾರರಾದ ಪ್ರೊ. ಘನಶ್ಯಾಮ್ ದಾಸ್ ಹಾಗು ಪ್ರೊ. ಎನ್.ಸಿ.ಬ್ಯಾನರ್ಜಿ ಅವರುಗಳು ಪಟ್ಟ ಶ್ರಮದಿಂದ ರೂಪಗೊಂಡಿತು ಈ ರಾಜ್ಯ ಸಂಗ್ರಹಾಲಯ. ಇವರು ಅಪರೂಪದ ಪುರಾತನ ವಸ್ತುಗಳ ಸಂಗ್ರಹಣಾ ಕಾರ್ಯವನ್ನು 1932 ರಿಂದಲೆ ಪ್ರಾರಂಭಿಸಿದ್ದರು. ತದನಂತರ ಒಡಿಶಾ ಸರ್ಕಾರವು ಈ ಸಂಗ್ರಹಾಲಯವನ್ನು ಅಧೀನಪಡಿಸಿಕೊಂಡು ರಾಜ್ಯ ಸಂಗ್ರಹಾಲಯದ ಮಾನ್ಯ್ತೆಯನ್ನು ನೀಡಿತು.
ಈ ಸಂಗ್ರಹಾಲಯದಲ್ಲಿ ಅಪರೂಪದ ಶಿಲ್ಪಕಲೆಗಳು, ಪುರಾತನ ನಾಣ್ಯಗಳು, ಲೋಹದ ವಸ್ತುಗಳು, ಸೂಕ್ಷ್ಮ ಕಲಾಕೃತಿಗಳು ಹೀಗೆ ಹಲವು ವಸ್ತುಗಳನ್ನು ಕಾಣಬಹುದು. 1947-48 ರಲ್ಲಿ ಈ ಸಂಗ್ರಹಾಲಯವು ಕಟಕ್ನಿಂದ ಭುವನೇಶ್ವರಕ್ಕೆ ಸ್ಥಳಾಂತರವಾಯಿತು. ಪ್ರಸ್ತುತ, ಭುವನೇಶ್ವರದ ಕಟ್ಟಡದಲ್ಲಿರುವ ಸಂಗ್ರಹಾಲಯವು 1960 ರಿಂದ ಕಾರ್ಯಾರಂಭ ಮಾಡಿತು.