ಬುದ್ಧ ಜಯಂತಿ ಉದ್ಯಾನವನವನ್ನು ಬುದ್ಧನ ಬೋಧನೆಗಳಿಗಾಗಿ ಅರ್ಪಿಸಲಾಗಿದೆ. ಒಡಿಶಾವು ಕಳಿಂಗ ಯುದ್ಧದ ನಂತರ ಹೊಚ್ಚ ಹೊಸ ಒಡಿಶಾವಾಗಿ ಪರಿವರ್ತನೆಗೊಂಡಿತು. ಇಲ್ಲಿನ ಜನರು ಗೌತಮ ಬುದ್ಧನ ಬೋಧನೆಗಳಿಂದಾಗಿ ಇತರ ಮಾನವರ ಒಳಿತಿಗಾಗಿ ಸಹ ಯೋಚನೆ ಮಾಡಲು ಆರಂಭಿಸಿದರು. ಬುದ್ಧನ ಬೋಧನೆಗಳನ್ನು ಮತ್ತು ಅವುಗಳ ಬಗೆಗೆ ಜನರ ಸದಾಭಿಪ್ರಾಯವನ್ನು ಕಾಯ್ದುಕೊಳ್ಳುವ ಸಲುವಾಗಿ ಬುದ್ಧ ಜಯಂತಿ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಭುಬನೇಶ್ವರ್ ಅಭಿವೃದ್ಧಿ ನಿಗಮದವರು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ.
ಚಂದ್ರಶೇಖರಪುರದಲ್ಲಿ 44 ಎಕರೆಗಳಷ್ಟು ವಿಸ್ತೀರ್ಣದಲ್ಲಿ ನೆಲೆಗೊಂಡಿರುವ ಈ ಉದ್ಯಾನವನವು ತನ್ನ ಭವ್ಯತೆಯಿಂದಾಗಿ ನೋಡುಗರ ಗಮನ ಸೆಳೆಯುತ್ತದೆ. ಈ ಉದ್ಯಾನವನ್ನು ಒಂದು ಎತ್ತರವಾದ ವೇದಿಕೆಯ ಮೇಲೆ ನಿರ್ಮಿಸಿರುವುದು ವಿಶೇಷ. ಚಂದಕ ಕಾಡು ಈ ಉದ್ಯಾನವನದ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಪ್ರಶಾಂತವಾದ ಉದ್ಯಾನವನದಲ್ಲಿ ಚಿಲಿ ಪಿಲಿಗುಟ್ಟುವ ಪಕ್ಷಿಗಳು ನಿಮಗೆ ಒಂದು ಅನುಪಮವಾದ ದಿವ್ಯಾನುಭವವನ್ನುಂಟು ಮಾಡುತ್ತದೆ.