ಭೀಮಾಶಂಕರ ಗ್ರಾಮದಲ್ಲಿರುವ, ಭೀಮಾಶಂಕರ ದೇವಾಲಯವು ಭಗವಾನ ಶಿವನಿಗೆ ಸಮರ್ಪಣೆಯಾದ ಮನೋಹರ ದೇವಾಲಯವಾಗಿದೆ. ಇದು ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲೊಂದಾಗಿದ್ದು, ನಾನಾ ಫಡ್ನಾವಿಸ್ ನಿರ್ಮಿಸಿದ ಈ ದೇವಾಲಯವು, ಮಹಾರಾಷ್ಟ್ರ ರಾಜ್ಯದಲ್ಲಿರುವ ಐದು ಜ್ಯೋತಿರ್ಲಿಂಗಗಳಲ್ಲೊಂದಾಗಿದೆ.
ಭಗವಾನ್ ಶಿವನು ಭೀಮನ ರೂಪದಲ್ಲಿ ಸಹ್ಯಾದ್ರಿ ಬೆಟ್ಟಗಳಲ್ಲಿ ವಾಸವಾಗಿದ್ದನು ಎಂದು ಹೇಳಲಾಗುತ್ತದೆ. ಭೀಕರ ಯುದ್ಧವೋಂದರಲ್ಲಿ ತ್ರಿಪುರಾಸುರನೆಂಬ ರಕ್ಕಸನನ್ನು ಸಂಹರಿಸಿದನು. ಯುದ್ದದ ನಂತರ ಶಿವನ ದೇಹದಿಂದ ಸುರಿದ ಬೆವರಿನಿಂದ ಪವಿತ್ರ ಭೀಮಾ ನದಿ ಜನ್ಮತಳೆಯಿತೆಂಬ ದಂತಕಥೆಯಿದೆ.
ಇಲ್ಲಿನ ಪವಿತ್ರ ಜ್ಯೋತಿರ್ಲಿಂಗವು ನಾಗ್ರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಇಲ್ಲಿ 13 ನೇ ಶತಮಾನದಷ್ಟು ಹಿಂದಿನ ಹಸ್ತಪ್ರತಿಗಳು ಸಿಕ್ಕಿವೆ. ಈ ದೇವಾಲಯದ ಆವರಣದ ಬದಿಯಲ್ಲಿ ಒಂದು ಸಣ್ಣ ಶನಿದೇವರ ದೇವಾಲಯವಿದ್ದು, ಹೆಮಂದಪಥಿ ಶೈಲಿಯ ವಾಸ್ತುಶಿಲ್ಪದ ಒಂದು ಬೃಹತ್ ಘಂಟೆಯನ್ನು ಅದರ ಪಕ್ಕದಲ್ಲಿ ಹಾಕಲಾಗಿದೆ.
ಈ ಧಾರ್ಮಿಕ ತಾಣವು ಕೇವಲ ಭಕ್ತರು ಮತ್ತು ಆರಾಧಕರಲ್ಲಿ ಮಾತ್ರ ಪ್ರಸಿದ್ಧಿ ಪಡೆಯದೇ, ಪಕ್ಷಿ ವೀಕ್ಷಕರಲ್ಲಿ ಮತ್ತು ಚಾರಣಿಗರಲ್ಲಿಯೂ ಜನಪ್ರೀಯತೆಯನ್ನು ಗಳಿಸಿದೆ. ವಿಶೇಷವಾಗಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ದೇವಾಲಯವು ಭಕ್ತಸಾಗರದಿಂದ ತುಂಬಿರುವುದನ್ನು ಕಾಣಬಹುದಾಗಿದೆ.