ವಿಜಯನಗರ ಸಾಮ್ರಾಜ್ಯದ ವಾಸ್ತುಶೈಲಿಯನ್ನು ಹೊಂದಿರುವ ಕೇತಪಯ್ಯ ದೇವಸ್ಥಾನದ ಇಂದಿಗೂ ಇತಿಹಾಸಕ್ಕೆ ಸಾಕ್ಷಿ ಎನ್ನುವಂತೆ ಭಟ್ಕಳ ನಗರದಲ್ಲಿದೆ. ವಿಜಯನಗರ ಅರಸರ ಕಲಾಪ್ರೇಮವನ್ನು ಈ ದೇವಸ್ಥಾನದ ಕಟ್ಟಡದಲ್ಲಿನ ಅನೇಕ ಕೆತ್ತನೆಗಳನ್ನು ನೋಡಿದರೆ ಅರಿವಾಗುತ್ತದೆ.ಇಲ್ಲಿರುವ ಇನ್ನೊಂದು ವಿಶೇಷವೆಂದರೆ ನವಗ್ರಹಗಳು. ಸುಂದರ ಕೆತ್ತನೆಯ ನವಗ್ರಹ ಮೂರ್ತಿಗಳೊಂದಿಗೆ ಸುತ್ತಲೂ ಅಷ್ಟದಿಕ್ಪಾಲಕರ ಮೂರ್ತಿಗಳು ರಕ್ಷಣೆಯಲ್ಲಿ ನಿಂತಂತೆ ಕಾಣುತ್ತವೆ. ಇಲ್ಲಿರುವ ದೇವಸ್ಥಾನದಲ್ಲಿ ರಾಮಾಯಣದಲ್ಲಿ ಬರುವ ರಾಮನ ವನವಾಸ, ರಾಮ ಪಟ್ಟಾಭಿಷೇಕ, ಪುತ್ರ ಕಾಮೇಷ್ಟಿ ಯಾಗ ಮುಂತಾದ ಪೌರಾಣಿಕ ಸನ್ನಿವೇಶಗಳನ್ನು ಸುಂದರವಾಗಿ ಕೆತ್ತಲಾಗಿದೆ. ದೇವಸ್ಥಾನದ ಮುಂಭಾಗಿಲಿನಲ್ಲಿ ಆಕರ್ಷಕ ಧ್ವಜಸ್ಥಂಭವವು ದೇವಾಲಯದ ಸೌಂದರ್ಯ ಇಮ್ಮಡಿಗೊಳಿಸುತ್ತದೆ.