ಭರತ್ಪುರ್ ನ ಹೃದಯಭಾಗದಲ್ಲಿ ನೆಲೆಸಿರುವ ಬಾಂಕೆ ಬಿಹಾರಿ ದೇವಸ್ಥಾನವು, ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ಅದ್ಭುತ ದೇವಾಲಯವು ಹಿಂದು ದೇವತೆಯಾದ ಕೃಷ್ಣನಿಗೆ ಸಮರ್ಪಿತವಾಗಿದೆ. ದೇವಸ್ಥಾನದ ಮುಖ್ಯ ಹಾಲ್ ಕೃಷ್ಣ ಹಾಗು ರಾಧೆಯರ ಪ್ರತಿಮೆಗಳನ್ನು ಒಳಗೊಂಡಿದೆ. ಮುಖ್ಯ ಹಾಲ್ ಗೆ ಹೋಗುವ ದಾರಿಯಲ್ಲಿ ಕೃಷ್ಣನ ಬಾಲ್ಯದ ಚಿತ್ರಣಗಳನ್ನು ಕಾಣಬಹುದು. ಇದಲ್ಲದೆ, ಹಲವು ಹಿಂದು ದೇವ, ದೇವತೆಯರ ವರ್ಣಚಿತ್ರಗಳು, ಈ ದೇವಸ್ಥಾನದ ಗೋಡೆಗಳನ್ನು ಅಲಂಕರಿಸಿರುವುದನ್ನು ಕಾಣಬಹುದು. ಬ್ರಿಜ್ ವಾಸ್ತು ಕಲೆಯನ್ನು ಹೊಂದಿರುವ ಈ ದೇವಸ್ಥಾನವನ್ನು ಸ್ಥಳೀಯ ಸಂಚಾರಿ ಮಾಧ್ಯಮಗಳ ಮೂಲಕ ಸುಲಭವಾಗಿ ತಲುಪಬಹುದು.