ಗಂಗಾನದಿಯ ತಟದಲ್ಲಿರುವ ಕುಪ್ಪಘಾಟ್ ಎಂಬ ಶಬ್ದ, ಕುಪ್ಪ ಎಂದರೆ 'ಗುಹೆ ಅಥವಾ ಸುರಂಗ' ಹಾಗೂ ಘಾಟ್ ಶಬ್ದದ ಅರ್ಥ 'ನದಿತಟದಲ್ಲಿರುವ ಒಂದು ಸ್ಥಳ' ಎಂಬ ಅರ್ಥ ನೀಡುತ್ತದೆ. ಪುರಾಣದ ಪ್ರಕಾರ ಸಂತ ಮಹಾಋಷಿಗಳು ಈ ಗುಹೆಯಲ್ಲಿ ಹಲವಾರು ತಿಂಗಳುಗಳನ್ನು ಕಳೆದಿದ್ದರು ಎನ್ನಲಾಗುತ್ತದೆ. ಕುಪ್ಪಘಾಟ್ ನಲ್ಲಿ ಹಣ್ಣಿನ ತೋಟ, ಉದ್ಯಾನವನಗಳು ಹಾಗೂ ರಾಮಾಯಣದ ಕತೆಯನ್ನು ತೋರಿಸುವಂತಹ ಚಿತ್ರಕಲೆಗಳನ್ನು ಒಳಗೊಂಡಿದೆ. ಬುದ್ಧನು ತನ್ನ ಮೊದಲಿನ ಜನ್ಮದಲ್ಲಿ ಈ ಸ್ಥಳದಲ್ಲಿ ವಾಸಿಸಿದ್ದನು ಎಂದು ಬಹಳ ಮಂದಿ ನಂಬುತ್ತಾರೆ.