ಗುಂಡಾಲಾ ಆಂಧ್ರ ಪ್ರದೇಶದ ಖಮ್ಮಮ್ ಜಿಲ್ಲೆಯ ಅಡಿಯಲ್ಲಿ ಬರುವ ಒಂದು ಉಪ ವಿಭಾಗ. ಈ ಪವಿತ್ರ ಸ್ಥಳವು ಭದ್ರಾಚಲಂ ಪಟ್ಟಣದಿಂದ 5 ಕಿ.ಮೀ ದೂರದಲ್ಲಿದೆ ಹಾಗೂ ಆಂಧ್ರ ಪ್ರದೇಶದ ರಾಜಧಾನಿ ಹೈದ್ರಾಬಾದ್ ನಿಂದ 258 ಕಿ.ಮೀ ಅಂತರದಲ್ಲಿದೆ. ಈ ಚಿತ್ರಸದೃಶ ಗ್ರಾಮ ಹಿಂದೂಗಳಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ ಸ್ಥಳವಾಗಿದೆ. ಏಕೆಂದರೆ ಇಲ್ಲಿ ಹಿಂದುಗಳ ಪ್ರಮುಖ ಮೂರು ದೇವರುಗಳಾದ / ದೇವತೆಗಳಾದ ಭಗವಾನ್ ಬ್ರಹ್ಮ (ಬ್ರಹ್ಮಾಂಡದ ಸೃಷ್ಟಿಕರ್ತ) ಭಗವಾನ್ ವಿಷ್ಣು (ಬ್ರಹ್ಮಾಂಡವನ್ನು ಎತ್ತಿಹಿಡಿದವನು) ಹಾಗೂ ಭಗವಂತ ಶಿವ (ಬ್ರಹ್ಮಾಂಡದ ವಿನಾಶಗಳ ವಿಧ್ವಂಸಕ) ಈ ಮೂರು ದೇವತೆಗಳು ಚಳಿಗಾಲದಲ್ಲಿ ಈ ಹಳ್ಳಿಯಲ್ಲಿರುವ ಬಿಸಿ ನೀರಿನ ಬುಗ್ಗೆಯಲ್ಲಿ ಮುಳುಗೇಳುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಬಿಸಿ ನೀರಿನ ಬುಗ್ಗೆಗಳು ಹಿಂದುಗಳ ಪ್ರಮುಖ ಪೂಜ್ಯನೀಯ ಸ್ಥಳವಾಗಿದೆ.
ಈ ಬಿಸಿ ನೀರಿನ ಬುಗ್ಗೆಯಲ್ಲಿ ಮುಳುಗೆದ್ದರೆ ಎಲ್ಲಾ ಅಸ್ವಸ್ಥತೆಗಳೂ ದೂರವಾಗಿ ಮೋಕ್ಷದ ಹಾದಿಯೂ ಸುಗಮವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಅಪಾರ. ಗೋದಾವರಿ ನದಿಯು ಲಕ್ಷಗಟ್ಟಲೆ ಯಾತ್ರಾರ್ಥಿಗಳನ್ನು ಸೆಳೆಯುವ ಇಂತಹ ಹಲವಾರು ಬಿಸಿ ನೀರಿನ ಬುಗ್ಗೆಗಳನ್ನು ಹೊಂದಿದೆ. ಆದ್ದರಿಂದ ಈ ಪ್ರದೇಶವು ಸದಾ ಭಕ್ತಾದಿಗಳಿಂದ ತುಂಬಿರುತ್ತದೆ.