ಕುಲಾಡ, ಮಾ ಬಾಗ್ ದೇವಿಯ ಆಧ್ಯಾತ್ಮಿಕ ಅನುಯಾಯಿಗಳಿಗೆ ಧಾರ್ಮಿಕ ಸ್ಥಳವಾಗಿದೆ. ಕುಲಾಡದಲ್ಲಿ ನೆಲೆಸಿರುವ ದೇವಾಲಯವು ದೇವಿಯಾದ ಬಾಗ್ ದೇವಿಗೆ ಸಮರ್ಪಿಸಲಾಗಿದೆ. ದೇವಾಲಯವು ಒಂದು ಬೆಟ್ಟದಮೇಲಿರುವುದರಿಂದ ಅದನ್ನು ತಲುಪಲು ಹಂತಗಳ ಮೆಟ್ಟಲುಗಳನ್ನು ಹತ್ತಿ ಹೋಗಬೇಕು. ಭಕ್ತರು 210 ಮೆಟ್ಟಲುಗಳನ್ನು ಹತ್ತಿ ಹೋದರೆ ದೇವಾಲಯದ ಪ್ರವೇಶ ದ್ವಾರವನ್ನು ತಲುಪಬಹುದು. ಕುಲಾಡಿನ ಮಹತ್ವವು ಕೇವಲ ಧಾರ್ಮಿಕ ದೃಷ್ಟಿಯಲ್ಲೇ ಕೊನೆಗೊಳ್ಳುವುದಿಲ್ಲ. ಪ್ರಸಿದ್ಧ ಹೆಸರುವಾಸಿಯಾದ ಮಹಾನ್ ಕವಿ ಸಾಮ್ರಾಟ್ ಉಪೇಂದ್ರ ಭಾಂಜ ಹುಟ್ಟಿದ ಸ್ಥಳವೂ ಆಗಿದೆ.
ಇಲ್ಲಿನ ಆಧ್ಯಾತ್ಮಿಕ ನಿಸರ್ಗದ ಶಕ್ತಿಗಳು ಮತ್ತು ಇಲ್ಲಿನ ಪ್ರಶಾಂತತೆಯು ಈ ಕವಿಗೆ ಮತ್ತಷ್ಟು ಕ್ರಿಯಾತ್ಮಕ ಪ್ರೋತ್ಸಾಹವನ್ನು ಪ್ರಾಯಶಃ ಕೊಟ್ಟಿರಬೇಕು. ಕೋಟೆಯ ಪೂರ್ವ ಭಾಗದಲ್ಲಿ ಮಹಾನದಿಯು ಹರಿಯುತ್ತಿದ್ದು ಪ್ರಾಚೀನಕಾಲದ ಕೋಟೆಯ ಅವಶೇಷಗಳ ದೃಶ್ಯವನ್ನು ಕಂಡರೆ ಕಳೆದುಹೋದ ಹಿಂದಿನ ಯುಗಾಂತರದ ನೆನಪುಗಳನ್ನು ತರುತ್ತದೆ. ಕೋಟೆಯ ಪಶ್ಚಿಮದಲ್ಲಿರುವ ಗೋಡೆಗಳು ಅಲ್ಲಿನ ದಟ್ಟ ಅರಣ್ಯವನ್ನು ಸುತ್ತುಗಟ್ಟಿದೆ. ಇದರಿಂದ ಸೂರ್ಯನ ಕಿರಣಗಳು ಅರಣ್ಯದ ಮರಗಳ ಮಧ್ಯೆ ತೂರಿಬರುವುದು ಬಹಳ ಕಡಿಮೆ.