ಚೆನ್ನಕೇಶವ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿರುವ ಇರುವುದೇ ವೀರನಾರಾಯಣ ದೇವಾಲಯ. ಹೊಯ್ಸಳರ ಅಧ್ಬುತ ವಾಸ್ತುಶಿಲ್ಪದ ಪ್ರತೀಕದಂತಿರುವ ಈ ದೇವಾಲಯ ಲಕ್ಷ್ಮೀ ನಾರಾಯಣ ದೇವಸ್ಥಾನ ಕೂಡ ಎಂದು ಕರೆಯಲ್ಪಡುತ್ತದೆ. ವಿಶಿಷ್ಟ ವಾಸ್ತುಕಲೆಯಿಂದ ಪ್ರವಾಸಿಗರ ಮನ ಸೆಳೆಯುವ ಈ ದೇವಾಲಯವು ಬೇಲೂರು ಪ್ರವಾಸದಲ್ಲಿ ಅವಿಸ್ಮರಣೀಯವಾಗುವುದರಲ್ಲಿ ಸಂಶಯವೇ ಇಲ್ಲ.ಪ್ರಾಚೀನ ಶಿಲ್ಪಕಲೆಯಲ್ಲಿರುವ ನಿರ್ಮಿತ ಈ ದೇವಸ್ಥಾನದ ಮಂಟಪದಲ್ಲಿ 37 ವಿಶಿಷ್ಟ ಶೈಲಿಯ ಕಿಟಕಿಗಳು ಹೊಯ್ಸಳರ ಕಲಾಪ್ರೇಮಕ್ಕೆ ಸಾಕ್ಷಿಯಾಗಿವೆ.ದೇವಾಲಯಕ್ಕೆ ಹೊಂದಿಕೊಂಡಿರುವ ಚಿಕ್ಕ ದೇವಾಲಯವು ವೈಷ್ಣವರ ಅನೇಕ ಕೆತ್ತನೆಗಳನ್ನು ಒಳಗೊಂಡು ಮನಮೋಹಕವಾಗಿದೆ. ದೇವಾಲಯದ ಪಶ್ಚಿಮ ಭಾಗದಲ್ಲಿರುವ ಗೋಡೆಗಳಲ್ಲಿರುವ ಕೆತ್ತಿರುವ ವಿಜಯನಾರಾಯಣ, ಚೆನ್ನಕೇಶವ ಹಾಗೂ ಲಕ್ಷ್ಮೀ ನಾರಾಯಣ ಮೂರ್ತಿಗಳು ಇಂದಿಗೂ ತಮ್ಮ ಸೌಂದರ್ಯವನ್ನು ಉಳಿಸಿಕೊಂಡಿವೆ.ಪ್ರವಾಸಿಗರು ಗಣೇಶ, ಶಿವ, ವಿಷ್ಣು, ಬ್ರಹ್ಮ, ಸರಸ್ವತಿ, ಪಾರ್ವತಿ, ಭೈರವ ಹಾಗೂ 59 ದೊಡ್ಡ ಭೀಮ ಮೂರ್ತಿಗಳನ್ನು ನೋಡಿ ಹೊಯ್ಸರು ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಹೊಗಳುವಂತಾಗುತ್ತಾರೆ. ಇದೇ ದೇವಸ್ಥಾನದ ಸುತ್ತಮುತ್ತಲಿನಲ್ಲಿರುವ ಹಲವಾರು ಚಿಕ್ಕ ಚಿಕ್ಕ ದೇವಸ್ಥಾನಗಳು ಪ್ರವಾಸಿಗರ ಮನ ಸೆಳೆಯುತ್ತವೆ. ಸೌಮ್ಯನಾಯಿ, ಕಪ್ಪೆ ಚೆನ್ನಂಗಿರಾಯ ದೇವಸ್ಥಾನಗಳು ಹೆಚ್ಚಿನ ಗಮನ ಸೆಳೆಯುತ್ತವೆ.