ಬೇಲೂರಿನ ಚೆನ್ನಕೇಶವ ದೇವಸ್ಥಾನದ ಸಮೀಪದಲ್ಲೇ ಇರುವ ದೊಡ್ಡ ಟ್ಯಾಂಕ್ ಕೂಡ ಪ್ರವಾಸಿಗರ ಮನ ಸೆಳೆಯುತ್ತದೆ. ಹೊಯ್ಸಳ ಸಾಮ್ರಾಜ್ಯದ ನರಸಿಂಹ ರಾಯ ಆಡಳಿತ ಕಾಲದಲ್ಲಿ ಪದ್ಮರಸನ ಮೇಲ್ವಿಚಾರಣೆಯಲ್ಲಿ ಈ ಭಾರೀ ಗಾತ್ರದ ಹೊಂಡವ ನ್ನು ನಿರ್ಮಿಸಲಾಗಿದೆ.ಉತ್ತಪ್ಪನಹಳ್ಳಿಯ ಕೃಷ್ಣದೇವರಾಯ, ಬಸಪ್ಪ ನಾಯಕರು ಈ ಹೊಂಡದಿಂದ ನೀರು ತರಲು ಭಕ್ತಾದಿಗಳಿಗೆ ಅನುಕೂಲವಾಗಲೆಂದು ಮೂರು ಕಡೆ ಮೆಟ್ಟಿಲು ನಿರ್ಮಿಸಿದರೆಂದು ಪ್ರತೀತಿ ಇದೆ.
ಇದೇ ಹೊಂಡದ ಮಧ್ಯದಲ್ಲಿ ಸುಂದರವಾದ ಮಂಟಪವನ್ನು ನಿರ್ಮಿಸಲಾಗಿದ್ದು, ಹಬ್ಬಗಳ ಸಮಯದಲ್ಲಿ ಸುಂದರವಾಗಿ ಈ ಮಂಟಪವನ್ನು ಅಲಂಕೃತಗೊಳಿಸಿರಲಾಗುತ್ತದೆ.