ವಿಜಯ ನಗರ ಸಾಮ್ರಾಜ್ಯದಲ್ಲಿ ಇದ್ದ ಶಿಲ್ಪಕಲಾ ವೈಭವವನ್ನು ಹೋಲುವ ಕಪ್ಪೆ ಚೆನ್ನಿಗರಾಯ ದೇವಸ್ಥಾನ ಹೊಯ್ಸಳ ರಾಜಕುಟುಂಬದ ಶಾಂತಲಾ ದೇವಿ ನಿರ್ಮಿಸಿದ್ದಾಳೆ ಎಂಬ ಪ್ರತೀತಿ ಇದೆ. ಈ ದೇವಸ್ಥಾನದಲ್ಲಿ ಕಲ್ಲಿನ ಕೆತ್ತನೆಯನ್ನು ನೋಡುವುದು ಪ್ರವಾಸಿಗರ ಸೌಭಾಗ್ಯವೇ ಸರಿ ಎನ್ನಬಹುದು. ಇನ್ನು ಶ್ರೀದೇವಿ ಮತ್ತು ಭೂದೇವಿ ಮತ್ತು ಸೌಮ್ಯನಾಯಕಿ, ರಂಗನಾಯಕಿ ಮೂರ್ತಿಗಳು ವೀರನಾರಾಯಣ ದೇವಸ್ಥಾನದಲ್ಲಿನ ವಿಶೇಷ ಆಕರ್ಷಣೆಯಾಗಿವೆ.