ಶೃಂಗಾರಮಯ ಯುವತಿಯರ ಮೈಮಾಟದ ಕೆತ್ತನೆ ಶಿಲ್ಪಗಳನ್ನು ಹೊಂದಿರುವ ಚೆನ್ನಕೇಶವ ದೇವಾಲಯದಂತಹದ್ದು ರಾಜ್ಯದ ಬೇರೆಲ್ಲೂ ಇಲ್ಲ. ಸಾಫ್ಟ್ ಸೋಪ್ ಎಂಬ ವಿಶೇಷ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಚೆನ್ನಕೇಶವ ದೇವಾಲಯದಲ್ಲಿ ವಿಷ್ಣುವಿನ ಅವತಾರವೆಂದೇ ಪೂಜಿಸಲ್ಪಡುತ್ತದೆ. ಸುಂದರ ಕೆತ್ತನೆ ಹೊಂದಿರುವ 48 ಕಂಬಗಳಿರುವ ಈ ದೇವಸ್ಥಾನವು ಕ್ರಿ.ಶ.1117 ರಲ್ಲಿ ನಿರ್ಮಾಣಗೊಂಡಿದೆ ಎಂದು ಐತಿಹಾಸಿಕ ಐತಿಹ್ಯವಿದೆ.
ಹೊಯ್ಸಳ ರಾಜ ಈ ದೇವಸ್ಥಾನದ ಇನ್ನೊಂದು ವಿಶೇಷವೆಂದರೆ ಇಲ್ಲಿ ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿನ ಕಥೆ, ಉಪನಿಷತ್ ಗಳನ್ನು ಚಿತ್ರ ರೂಪದಲ್ಲಿ ಕೆತ್ತಲಾಗಿದೆ. ಇವುಗಳೊಂದಿಗೆ ನವಗ್ರಹಗಳ ಕುರಿತಾದ ಮೂರ್ತಿಗಳನ್ನೂ ಇಲ್ಲಿ ಸುಂದರವಾಗಿ ಕಲ್ಲಿನಲ್ಲಿ ಕೆತ್ತಲಾಗಿದೆ. ಈ ದೇವಾಲಯದ ವರಾಂಡದೊಳಗೆ ಇರುವ ಹಲವಾರು ದೇವಾಲಯಗಳು ವಿಶಿಷ್ಟ ಶೈಲಿಯಲ್ಲಿ ಕಟ್ಟಿರುವುದರಿಂದ ಪ್ರವಾಸಿಗರಿಗೆ ಹಿಂದಿನ ಜನರ ಕಲಾ ಕೌಶಲ್ಯವು ಬೆರಗು ಮೂಡಿಸುತ್ತವೆ.
ಈ ದೇವಾಲಯಗಳಲ್ಲಿನ ಗೋಡೆ, ಬಾಗಿಲು ಮತ್ತು ಛಾವಣಿಗಳಲ್ಲಿ ಪ್ರಾಣಿ, ಪಕ್ಷಿಗಳ ಅನೇಕ ಚಿತ್ರಗಳು ಸುಂದರ ರೂಪದಲ್ಲಿ ಕೆತ್ತಿರುವುದನ್ನು ನೋಡುವುದೇ ಒಂದು ಅದ್ಭುತ ಅನುಭವ.ವಿಜಯ ನಗರ ಸಾಮ್ರಾಜ್ಯದ ಸಮಯದಲ್ಲಿ ನಿರ್ಮಿಸಲಾಗಿದೆಯೆನ್ನಲಾದ ಸುಂದರ ರಾಯಗೋಪುರ ಮತ್ತು ದೇವಾಲಯ ಒಳಗಿರುವ ಸುಂದರ ಪುಷ್ಕರಣಿ ಪ್ರವಾಸಿಗರಿಗೆ ಮನ ತಣಿಸುತ್ತದೆ. ಕಪ್ಪೆ ಚೆನ್ನಿಗರಾಯ ಮತ್ತು ಲಕ್ಷ್ಮೀ ದೇವಸ್ಥಾನಗಳು ಇಲ್ಲಿ ಭಕ್ತರ ಅಭಿಲಾಷೆ ಈಡೇರಿಸುತ್ತವ ಎಂಬ ಪ್ರತೀತಿ ಮೊದಲಿನಿಂದಲೂ ಇದೆ.