ಮೈಸರ್ ಖಾನಾವು ಬಟಿಂಡಾದಿಂದ 29 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ದುರ್ಗಾ ದೇವಿ ಮತ್ತು ಜ್ವಾಲಾಜೀಯವರಿಗಾಗಿ ನಿರ್ಮಿಸಲಾದ ಒಂದು ದೇವಾಲಯವು ಇಲ್ಲಿದೆ. ಜನಪದ ಕತೆಯ ಪ್ರಕಾರ ಕಮಲ ಎಂಬ ಭಕ್ತನು ಈ ದೇವಾಲಯಕ್ಕೆ ತೀರ್ಥಯಾತ್ರೆ ಮಾಡಬೇಕೆಂದು ಕೊಂಡಿದ್ದನಂತೆ, ಆದರೆ ಅದು ಕಾರಣಾಂತರದಿಂದ ನೆರವೇರಲಿಲ್ಲ. ಅದಕ್ಕಾಗಿ ಆತನು ಪ್ರಾಯಶ್ಚಿತ ರೂಪವಾಗಿ ಜೀವನ ಪರ್ಯಂತ ತಪಸ್ಸು ಮಾಡಿ ದೇವಿಯನ್ನು ಮೆಚ್ಚಿಸಲು ಯತ್ನಿಸಿದನಂತೆ. ಇದರಿಂದ ಸಂತುಷ್ಟಗೊಂಡ ದೇವಿ ಆತನಿಗಾಗಿ ವರ್ಷದಲ್ಲಿ ಎರಡು ಬಾರಿ ಪ್ರತ್ಯಕ್ಷಗೊಂಡಳಂತೆ. ಅದನ್ನು ನೆನಪಿಸಲು ಇಲ್ಲಿ ಪ್ರತಿ ವರ್ಷ ಎರಡೆರಡು ಬಾರಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ಜಾತ್ರೆಗಳಿಗೆ ಭಕ್ತಾಧಿಗಳು ದೇಶದ ನಾನಾ ಮೂಲೆಗಳಿಂದ ಆಗಮಿಸುತ್ತಿರುತ್ತಾರೆ.