ಬಸ್ತಿಯಲ್ಲಿ 1956 ರಲ್ಲಿ ಸ್ಥಾಪಿಸಲಾಗಿರುವ ತೋಟಗಾರಿಕೆ ಆರ್ & ಡಿ ತರಬೇತಿ ಕೇಂದ್ರ ಉತ್ತರಪ್ರದೇಶ ಪೂರ್ವ ಪ್ರದೇಶದಲ್ಲಿ ತೋಟಗಾರಿಕಾ ಮತ್ತು ಕೃಷಿ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಇದು ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ಆಸಕ್ತ ಪ್ರವಾಸಿಗರಿಗೆ ಕಲಾತ್ಮಕ ಭೂದೃಶ್ಯದ ಸೊಬಗನ್ನೂ ನೀಡುತ್ತದೆ.
ಕೇಂದ್ರದಲ್ಲಿ ಹಣ್ಣುಗಳು, ಅಲಂಕಾರಿಕ ಸಸ್ಯಗಳು, ತರಕಾರಿಗಳನ್ನು ಮತ್ತು ಬೆಳೆಗಳ ವಿವಿಧ ಕೃಷಿ ತರಬೇತಿ ಮತ್ತು ಸಂಶೋಧನಾ ಕಾರ್ಯ ನಡೆಸುಲಾಗುತ್ತದೆ. ಅಣಬೆಗಳ ಸಂಶೋಧನೆ ಮತ್ತು ಉತ್ಪಾದನೆಯ ಮೇಲೆ ವಿಶೇಷ ಒತ್ತು ನೀಡಲಾಗಿದೆ. ಕೇಂದ್ರವು ಅಣಬೆ ತತ್ತಿ (ಸಸ್ಯಗಳ) ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ಉನ್ನತ ಗುಣಮಟ್ಟದ ಅಣಬೆ ಬೀಜವನ್ನು ಅಣಬೆ ರೈತರಿಗೆ ಪೂರೈಸಲಾಗುತ್ತದೆ. ಇದು ಜೇನು ಉತ್ಪಾದನೆಗಾಗಿ ಜೇನುಸಾಕಣೆ ವಿಭಾಗವನ್ನೂ ಹೊಂದಿದ್ದು ಜೇನು ಸಾಕಾಣಿಕೆ ಮಾಡುವ ರೈತರಿಗೆ ತರಬೇತಿ ನೀಡುವ ಸೌಲಭ್ಯಗಳನ್ನು ಒದಗಿಸಲಾಗಿದೆ.
ಅಲ್ಲದೇ ಈ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರನ್ನುಗಳಿಸಿದ ಆಮ್ರಪಾಲಿ, ರೋಮನಿ ಮತ್ತು ನೀಲಂ ವಿವಿಧ ಉನ್ನತ ಗುಣಮಟ್ಟದ ಸಿಹಿ ಮಾವಿನಹಣ್ಣುಗಳ ಉತ್ಪಾದನೆ ಮಾಡುತ್ತದೆ. ಇದು ದೇಶದ ಎಲ್ಲಾ ರೈತರಿಗೆ ಈ ಪ್ರಭೇದಗಳ ಸಸಿಗಳನ್ನು ಪೂರೈಸುತ್ತದೆ.