ಚಾವನಿ ಬಜಾರ್, ಕರಮಯಾ ಹಳ್ಳಿಯಿಂದ 12 ಕಿಲೋಮೀಟರ್ ಮತ್ತು ಬಸ್ತಿ ನಗರದಿಂದ 40 ಕಿಲೋಮೀಟರ್ ದೂರದಲ್ಲಿದೆ. ಇದು 1850 ರಲ್ಲಿ ಭಾರತದಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸೇನೆಯ ಪ್ರಮುಖ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸಿತ್ತು. ಆದರೆ 1857 ರಲ್ಲಿ ಭಾರತ ಮೊದಲ ಸ್ವಾತಂತ್ರ ಸಮರದ ಸಮಯದಲ್ಲಿ ಬ್ರಿಟಿಷ್ ಆಡಳಿತಗಾರರ ವಿರುದ್ಧ ಭಾರತೀಯರ ಕ್ರಾಂತಿಯ ಕೇಂದ್ರವಾಯಿತು. ಇಲ್ಲಿ ಜನರಲ್ ಫೋರ್ಟ್, ಬ್ರಿಟಿಷ್ ಸೈನ್ಯದ ಕಮಾಂಡರ್ ನನ್ನು ಕೊಲೆಮಾಡಲಾಯಿತು!
ಬಜಾರ್ ಪ್ರದೇಶದಲ್ಲಿ ಪ್ರವಾಸಿ ಹೆಗ್ಗುರುತಾಗಿ ಅಶ್ವಥ್ ಮರವನ್ನು ಕಾಣಬಹುದು. ತಮ್ಮ ಕಮಾಂಡರ್ ಕೊಲೆಯಿಂದ ಸಿಟ್ಟಿಗೆದ್ದ ಬ್ರಿಟಿಷ್ ಸೇನೆ 250 ಭಾರತೀಯ ಹೋರಾಟಗಾರರನ್ನು ಕ್ರೂರವಾಗಿ ಕೊಂದು ಈ ಅಶ್ವಥ್ ಮರಕ್ಕೆ ನೇಣುಹಾಕಿತ್ತು. ಅಲ್ಲಿಂದೀಚೆಗೆ, ಚಾವನಿ ಬಜಾರ್ ಒಂದು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು ಮತ್ತು ಒಂದು ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.