ಅಹಮತ್ ಪೂಲ್ ಅಥವಾ ಅಹಮತ್ ಸೇತುವೆ, ಬಸ್ತಿ ನಗರದ ಹೊರ ಪ್ರದೇಶದಲ್ಲಿ ಕುವಾನಾ ನದಿಯ ಮೇಲಿದೆ. ಬ್ರಿಟಿಷ್ ಸರ್ಕಾರದಿಂದ ನಿರ್ಮಿಸಲಾದ ಈ ಸೇತುವೆಯು ಅಯೋಧ್ಯಾ, ಫೈಜಾಬಾದ್ ಮತ್ತುಲಖನೌನಂತಹ ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಈ ಸೇತುವೆ ಕುವಾನಾ ನದಿ ದಂಡೆಯಲ್ಲಿದ್ದ ಸನ್ಯಾಸಿಗಳಿಂದ ಹೆಸರನ್ನು ಪಡೆದುಕೊಂಡಿದೆ. ಇದರ ಸಮೀಪದಲ್ಲಿ ಶಿವ ದೇವನ ದೇವಾಲಯವೊಂದನ್ನು ಕಾಣಬಹುದು. ಜನನಿಬಿಡತೆಯನ್ನು ಹೊಂದಿದ ನಗರದ ಗದ್ದಲದ ಬದುಕಿಗೆ ವಿಶ್ರಾಂತಿಯನ್ನು ನೀಡುವ ಒಂದು ರೀತಿಯ ಶಾಂತಿ ಧಾಮವಾಗಿದೆ ಈ ತಾಣ. ನದಿಯ ದಂಡೆಯಲ್ಲಿರುವ ಎರಡು ಆಧ್ಯಾತ್ಮಿಕ ಸ್ಥಳಗಳ ಸಮೀಪದಲ್ಲಿ ಶಾಂತಿಯನ್ನು ಪಡೆಯುವುದಕ್ಕಾಗಿ ಇಲ್ಲಿಗೆ ಜನರು ಆಗಮಿಸುತ್ತಿರುತ್ತಾರೆ. ಅಲ್ಲದೇ ಬೆಳಿಗ್ಗೆ ಮತ್ತು ಸಾಯಂಕಾಲದ ಅವಧಿಗಳಲ್ಲಿ ದೇವಾಲಯದ ಅಥವಾ ಆಶ್ರಮಕ್ಕೆ ಭೇಟಿ ನೀಡಿ ದೈಹಿಕ ವ್ಯಾಯಾಮ ಮತ್ತು ಯೋಗಗಳನ್ನು ಮಾಡಲು ಸಾಕಷ್ಟು ಜನ ಆಗಮಿಸುತ್ತಾರೆ.