ಪಾರ್ಶ್ವನಾಥ ದೇವಸ್ಥಾನ ಎಂದೂ ಕರೆಯಲಾಗುವ ನಕೊಡಾ ದೇವಸ್ಥಾನವು, ಭಾರತದ ಜೈನ ಧರ್ಮ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಕಪ್ಪು ಕಲ್ಲಿನಿಂದ ಮಾಡಲಾದ ಪಾರ್ಶ್ವನಾಥನ ವಿಗ್ರಹವನ್ನು ಕಾಣಬಹುದು. ಜೋಧಪುರ್-ಬಾಡಮೇರ್ ರಸ್ತೆಗೆ 1500 ಅಡಿಗಳಷ್ಟು ದೂರದಲ್ಲಿರುವ ಈ ದೇವಸ್ಥಾನವನ್ನು ಸುಮಾರು ಮೂರನೆ ಶತಮಾನದಲ್ಲಿ ನಕೋರ್ಸೇನ್ ಮತ್ತು ವೀರಸೇನ್ ಸಹೋದರರು ನಿರ್ಮಿಸಿದ್ದರೆನ್ನಲಾಗಿದೆ.ಪೂಜ್ಯರಾದ ಆಚಾರ್ಯ ಸ್ಥುಲಿಭದ್ರಸುರಿಯವರಿಂದ ವಿಗ್ರಹವು ಪ್ರತಿಷ್ಠಾಪಿಸಲ್ಪಟ್ಟಿದೆ. 1224 ರಲ್ಲಿ ಆಲಂ ಶಾಹನು ಆಕ್ರಮಣ ಮಾಡಿದಾಗ, ಜೈನ ಸಂಘವು ಈ ವಿಗ್ರಹವನ್ನು ಕಲಿದರ ನಲ್ಲಿ ಬಚ್ಚಿಟ್ಟು, 1373 ಪುನರ್ ಪ್ರತಿಷ್ಠಾಪಿಸಲಾಯಿತು. ಇದು ಮೂಲತಃ ವಾಗಿ ಮಹಾವೀರನಿಗೆ ಸಮರ್ಪಿತವಾದ ಮಂದಿರವೆಂದು ನಂಬಲಾಗಿದೆ. ರಿಷಭದೇವಾ ಮತ್ತು ಶಾಂತಿನಾಥರಿಗೆ ಸಮರ್ಪಿತವಾದ ಮಂದಿರಗಳೂ ಇಲ್ಲಿವೆ.