ಶ್ರೀ ತ್ರಿವಾತಿ ನಾಥ ದೇವಾಲಯವು ಪುರಾತನ ಶಿವನ ದೇವಾಲಯಗಳಲ್ಲಿ ಒಂದು. ಇದು ಬರೇಲಿಯ ಹೊರಭಾಗದಲ್ಲಿದೆ. ಇಲ್ಲಿ ಶಿವನನ್ನು ತ್ರಿವಾತಿನಾಥ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ಶಿವ ಅಥವಾ ತ್ರಿವಾತಿ ನಾಥನು ಪಾಂಚಾಲ ಪ್ರದೇಶದಲ್ಲಿನ ಕಾಡಿನಲ್ಲಿ ಮೂರು ಆಲದ ಮರಗಳಡಿಯಲ್ಲಿ ಮಲಗಿರುವ ಕುರುಬನ ಕನಸಲ್ಲಿ ಬರುವುದಾಗಿ ಭವಿಷ್ಯ ನುಡಿದಿದ್ದ. ಅದರಂತೆ ಆಲದ ಮರದಡಿಯಲ್ಲಿ ಮಲಗಿದ್ದ ಕುರುಬನು ಕನಸಿನಲ್ಲಿ ಶಿವಲಿಂಗವನ್ನು ನೋಡಿದ. ಅವನು ಎಚ್ಚರಗೊಂಡು ನೋಡಿದಾಗ ಮರದ ಬೇರಿನ ಸಮೀಪ ಶಿವಲಿಂಗ ಕಾಣಿಸಿತು.
ಈ ಘಟನೆಯು ಹಿಂದೂ ಪಂಚಾಂಗದ ಪ್ರಕಾರ ವಿಕ್ರಾಮಿ ಸಂವತ್ಸರ 1474 ರಲ್ಲಿ ನಡೆಯಿತು. ಈ ಸಮಯವು ಪ್ರಖ್ಯಾತ ದಿವಸ್ ಅಥವ ಬಾಬಾ ತ್ರಿವೇತಿ ನಾಥ ಭಗವಾನನು ಲಿಂಗ ರೂಪದಲ್ಲಿ ಅವತರಿಸಿದ ದಿನ. ಭಕ್ತಾದಿಗಳ ನಂಬಿಕೆಯ ಪ್ರಕಾರ ಶ್ರೀ ತ್ರಿವೇತಿನಾಥನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದರೆ ಭಕ್ತಾದಿಗಳ ಇಷ್ಟಾರ್ಥಗಳು ನೆರವೇರುವುದಂತೆ. ಆದ್ದರಿಂದಲೇ ದೇವಾಲಯಕ್ಕೆ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.