ದೂಪೇಶ್ವರನಾಥ ದೇವಾಲಯವು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯ ಪಡೆದ ಸ್ಥಳದಲ್ಲಿದೆ. ಈ ಸ್ಥಳದಲ್ಲಿ ಮಹಾಭಾರತದ ಕೇಂದ್ರ ಪಾತ್ರವಾದ ದ್ರೌಪದಿ ಮತ್ತು ದೃಷ್ಟದ್ಯುಮ್ನನು ಶಿವನ ಆಶೀರ್ವಾದಿಂದ ಜನಿಸಿದರು. ಗ್ರಂಥಗಳ ಪ್ರಕಾರ, ಋಷಿ ಅತ್ರಿಯ ಅನುಯಾಯಿಗಿದ್ದ ಋಷಿ ಧೂಮನ ಮುಂದೆ ಶಿವನು ಲಿಂಗ ಸ್ವರೂಪನಾಗಿ ಪ್ರತ್ಯಕ್ಷನಾದಾಗ ಈ ದೇವಸ್ಥಾನ ಸ್ಥಳವು ಪಾವಿತ್ರ್ಯತೆಯನ್ನು ಪಡೆಯಿತು. ಈ ಮುಂಚೆ ಋಷಿ ಅತ್ರಿಯು ಇದೆ ಸ್ಥಳದಲ್ಲಿ ಶಿವನ ಕುರಿತು ದೀರ್ಘಾವಧಿಯವೆರೆಗೆ ಧ್ಯಾನಿಸಿದ್ದರು. ಆ ನಂತರ ಇಲ್ಲಿ ದೇಗುಲವನ್ನು ನಿರ್ಮಿಸಲಾಯಿತಂತೆ. ಇಲ್ಲಿ ಋಷಿ ಧೂಮನು ಹಲವು ವರ್ಷಗಳ ಕಾಲ ಇಲ್ಲಿ ಶಿವನನ್ನು ಪೂಜಿಸಿದನಂತೆ.
ದೂಪೇಶ್ವರನಾಥ ದೇವಾಲಯವು ನಗರದ ದಂಡು ಪ್ರದೇಶದಲ್ಲಿದೆ. ದೇವಾಲಯದಲ್ಲಿ ಪುರಾತನ ಸುರಂಗ ಅಥವ ಗುಹೆಯಿದೆ. ಇದು ದೂಪೇಶ್ವರನಾಥನ ವಿಗ್ರಹದವರೆಗೆ ಹೋಗುತ್ತದೆ. ಇದು ಸಣ್ಣ ಸುರಂಗವಾಗಿದ್ದರೂ ಇಲ್ಲಿ ಮಂಡಿಯವರೆಗೆ ನೀರಿದೆ. ಭಕ್ತಾದಿಗಳು ಈ ನೀರಿನಲ್ಲಿ ನಡೆದುಕೊಂಡೇ ಹೋಗಿ ದೇವರ ದರ್ಶನ ಪಡೆಯಬೇಕು. ದೇವಾಲಯದಲ್ಲಿ ಒಂದು ನೀರಿನ ಸೆಲೆಯಿದ್ದು ಇದು ಚರ್ಮರೋಗಗಳನ್ನು ಗುಣಪಡಿಸುವ ಗುಣ ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಬರೇಲಿಯಲ್ಲಿನ ಪುರಾತನ ದೇವಾಲಯಗಳಲ್ಲಿ ಒಂದು. ದೂಪೇಶ್ವರ ನಾಥ ದೇವಾಲಯವನ್ನು ನಗರವನ್ನು ಪೈಶಾಚಿಕ ಶಕ್ತಿಗಳಿಂದ ರಕ್ಷಿಸುವ ‘ರಕ್ಷಾ ಕವಚ’ ಎಂದು ಹೇಳಲಾಗುತ್ತದೆ.