ಉತ್ತರ ಪ್ರದೇಶದಲ್ಲಿನ ಬರೇಲಿ ಜಿಲ್ಲೆಯು ಉತ್ತರ ಭಾರತದ ಮುಖ್ಯ ವಾಣಿಜ್ಯ ಕೇಂದ್ರ. ಇದು ನಗರದಲ್ಲಿರುವ ಹಲವು ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಪ್ರಸಿದ್ಧವಾಗಿದೆ. ರಾಮಗಂಗಾ ನದಿ ದಂಡೆಯಲ್ಲಿರುವ ಈ ನಗರವು ಹಲವು ಕುತೂಹಲಕಾರಿ ವಸ್ತು ಸಂಗ್ರಹಾಲಯಗಳಿಗೆ ಮತ್ತು ಮನೋರಂಜನಾ ಉದ್ಯಾನವನಗಳಿಗೆ ತವರು ಪ್ರದೇಶವಾಗಿದೆ.
ಬರೇಲಿಯು ಪೀಠೋಪಕರಣ ತಯಾರಿಕೆಯ ಮುಖ್ಯ ಕೇಂದ್ರ. ಅದರಲ್ಲೂ ಬಿದಿರಿನ ಪೀಠೋಪಕರಣಗಳಿಗೆ ಪ್ರಸಿದ್ಧವಾದದ್ದು. ಈ ನಗರವು ಬನ್ಸ್-ಬರೇಲಿ ಎಂದು ಪ್ರಸಿದ್ಧವಾಗದೆ. ಬನ್ಸ್ ಎಂದರೆ ಬಿದಿರು ಎಂದರ್ಥ. ಆದರೆ ಈ ನಗರಕ್ಕೆ ಈ ಹೆಸರು ಬಂದದ್ದು ಬಿದಿರಿನಿಂದಲ್ಲ. ಬದಲಿಗೆ 1537ರಲ್ಲಿ ಜಗತ್ಸಿಂಗ್ನ ಇಬ್ಬರು ಮಕ್ಕಳಾದ ಬನ್ಸಲ್ದೇವ್ ಮತ್ತು ಬಲದೇವ ಈ ನಗರವನ್ನು ಕಟ್ಟಿದ್ದರಿಂದ ಈ ಹೆಸರು ಬಂದಿತು.
ಬರೇಲಿಯ ಸುತ್ತಮುತ್ತಲ ಪ್ರವಾಸಿ ತಾಣಗಳು
ಬರೇಲಿಯಲ್ಲಿ ನಾಲ್ಕು ಪ್ರಮುಖ ಶಿವ ದೇವಾಲಯಗಳಿವೆ: ದೊಪೇಶ್ವರನಾಥ, ಮಧಿನಾಥ, ತ್ರಿವಾತಿನಾಥ ಮತ್ತು ಅಲೋಕನಾಥ. ಈ ನಾಲ್ಕು ದೇವಾಲಯಗಳು ನಗರದ ನಾಲ್ಕು ದಿಕ್ಕುಗಳಲ್ಲಿವೆ. ಇಲ್ಲಿನ ಲಕ್ಷ್ಮೀನಾರಾಯಣ ದೇವಾಲಯವು ಭೇಟಿ ನೀಡಲೇಬೇಕಾದ ಮುಖ್ಯ ದೇವಾಲಯ. ಬರೇಲಿಯಲ್ಲಿ ಫನ್ ಸಿಟಿ ಎನ್ನುವ ಪ್ರಸಿದ್ಧವಾದ ಮನೋರಂಜನಾ ಉದ್ಯಾನವನವಿದ್ದು ನೀರಿನಾಟಗಳಿಗೆ ಮತ್ತು ಕುಟುಂಬದವರೊಂದಿಗೆ ಪ್ರವಾಸ ಹೋಗಲು ಸೂಕ್ತ ಸ್ಥಳ. ಇಲ್ಲಿನ ಇನ್ನಿತರ ಧಾರ್ಮಿಕ ಸ್ಥಳಗಳೆಂದರೆ ದರ್ಗಾ ಏ ಅಲ-ಹಜ಼ರತ್, ಬೀಬೀ ಜಿ ಕೀ ಮಸ್ಜಿದ್ ಮತ್ತು ಶ್ರೀ ಸಾಯಿ ಮಂಡಿ. ನಗರದ ಇತಿಹಾಸವನ್ನು ತಿಳಿಯಲು ಆಸಕ್ತಿಯಿರುವವರು ಇಲ್ಲಿನ ಪಾಂಚಾಲ ವಸ್ತುಸಂಗ್ರಹಾಲಯ ಮತ್ತು ಆರ್ಮಿ ಸರ್ವೀಸ್ ಕಾರ್ಪ್ಸ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬಹುದು.
ಬರೇಲಿಗೆ ಭೇಟಿ ನೀಡಲು ಸೂಕ್ತ ಸಮಯ
ಚಳಿಗಾಲ ಬರೇಲಿಗೆ ಭೇಟಿ ನೀಡಲು ಸೂಕ್ತ ಸಮಯ.
ಬರೇಲಿಗೆ ತಲುಪುವುದು ಹೇಗೆ?
ಬರೇಲಿಯನ್ನು ರಸ್ತೆ, ರೈಲು ಮತ್ತು ವಿಮಾನದ ಮೂಲಕ ತಲುಪಬಹುದು. ನವದೆಹಲಿ ಬರೇಲಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ.