ಮಹಾದೇವ ದೇವಸ್ಥಾನ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಾಚೀನ ಕಾಲದ್ದು ಮತ್ತು ಅತ್ಯಂತ ಅಪರೂಪದ ಶಿವಲಿಂಗಗಳು ಇಲ್ಲಿವೆ. ನಿಷ್ಠಾವಂತ ಭಕ್ತರು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಸಿದ್ದ ದಂತಕಥೆಗಳ ಪ್ರಕಾರ, ಸರಳ ಬ್ರಾಹ್ಮಣ ಪಂಡಿತನಾದ ಲೋಧೆರಾಮ್ ಅವಸ್ತಿ ತನ್ನ ಜಮೀನಿನಲ್ಲಿ ಅಗೆಯುತ್ತಿದ್ದಾಗ ಈ ಮೂರ್ತಿ ಸಿಕ್ಕಿ ಅದನ್ನು ಪ್ರತಿಷ್ಠಾಪಿಸಿದ. ಮಹಾಭಾರತದ ಮೂಲ ಕಥೆಯಲ್ಲಿ ಹಲವಾರು ಸಂದರ್ಭಗಳಲ್ಲಿ ಈ ದೇವಸ್ಥಾನದ ಉಲ್ಲೇಖವಿದೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ದೇವಸ್ಥಾನವನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ ಮತ್ತು ಇಡೀ ರಾತ್ರಿ ವಿಶೇಷ ಪ್ರಾರ್ಥನೆ ಜಪತಪಗಳು ನಡೆಯುತ್ತವೆ.