ಇದು ಕರ್ನಾಟಕದ ಗ್ರಾಮಾಂತರ ಪ್ರದೇಶದಲ್ಲಿ ಬೆಂಗಳೂರಿನ ದಕ್ಷಿಣಕ್ಕೆ 21 ಕಿ.ಮೀ. ದೂರದಲ್ಲಿದೆ. 1981 ರಲ್ಲಿ ಶ್ರೀ ಶ್ರೀ ರವಿಶಂಕರ ಅವರಿಂದ ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯ ಮುಖ್ಯ ಧ್ಯೇಯವೆಂದರೆ ಒತ್ತಡ ರಹಿತ, ಅಹಿಂಸೆಯ ಸಮಾಜ ನಿರ್ಮಾಣ ಮಾಡುವುದಾಗಿದೆ. ಆಶ್ರಮದ ಹೆಸರು ಮತ್ತು ಅದರ ಸಂದೇಶವು 150 ದೇಶಗಳಲ್ಲಿ ಪಸರಿಸಿ 300 ಮಿಲ್ಲಿಯನ್ ಗೂ ಅಧಿಕ ಅನೂಯಾಯಿಗಳಿದ್ದಾರೆ. ಆದರೂ ಕೂಡ ಬೆಂಗಳೂರಿನ ಈ ಸಂಸ್ಥೆಯನ್ನೇ ತಮ್ಮ ಪ್ರಧಾನ ವಿಭಾಗವನ್ನಾಗಿರಿಸಿದ್ದಾರೆ. ಸಂಸ್ಥೆಯು ತನ್ನೆಲ್ಲ ಚಟುವಟಿಕೆಗಳನ್ನು ಸಾಮಾಜಿಕ ವ್ಯವಹಾರದಲ್ಲೆ ನಿರ್ವಹಿಸುತ್ತದೆ. ಯೋಗ ಮತ್ತು ಧ್ಯಾನದ ಕಾರ್ಯಾಗಾರಗಳನ್ನು ನಡೆಸಿಕೊಡುತ್ತ ಮನುಷ್ಯನ ಪ್ರತಿದಿನದ ಒತ್ತಡವನ್ನು ಕಳೆಯುವಲ್ಲಿ ಸಹಕಾರಿಯಾಗಿವೆ. ಇದರ ಈ ರೀತಿಯ ಕಾರ್ಯಕ್ರಮಗಳು ಗುಂಪುಗಳಲ್ಲಿ ಜನಪ್ರಿಯವಾಗಿದ್ದು, ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿದೆ. ಈ ಆಧ್ಯಾತ್ಮಿಕ ಹಾಗು ಸಾಮಾಜಿಕ ಸಂಸ್ಥೆಯು ದಶಕಗಳಿಂದ ಮಾನವೀಯತೆಯಾಧಾರದಡಿಯಲ್ಲಿ ಹಲವು ಯೋಜನೆಗಳನ್ನು ಪೂರ್ಣಗೊಳಿಸಿ ಕೊಂಗೊ(ಸಿ.ಒ.ಎನ.ಜಿ.ಒ)ನಂಥ ಸಂಸ್ಥೆಯ ಸದಸ್ಯತ್ವವನ್ನೂ ಪಡೆದಿದೆ. ಸಂಸ್ಥೆಯು ಜೀವನಕಲೆ, ಧ್ಯಾನ ಮುಂತಾದವುಗಳ ಮೇಲೆ ಕೋರ್ಸಗಳನ್ನು ಬಿತ್ತರಿಸುತ್ತಿದ್ದು, ನೀವು ಹಲವು ದಿನಗಳ ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿದ್ದರೆ, ಕೆಲವು ದಿನಗಳನ್ನು ಇಲ್ಲಿ ಕಳೆದು ಆಧ್ಯಾತ್ಮಿಕ ಸಂತುಷ್ಟಿಯನ್ನು ಹೊಂದುವುದು ಒಂದು ಉತ್ತಮವಾದ ಬದಲಾವಣೆಯಾಗಬಹುದು.