ಇದೊಂದು ಜಗತ್ತಿನ ದೊಡ್ಡದಾದ ಧ್ಯಾನದ ಪಿರಮಿಡನ್ನು ಹೊಂದಿದ ಅಂತಾರಾಷ್ಟ್ರೀಯ ಕೇಂದ್ರವಾಗಿದ್ದು, ಕೇವಲ ಜನಗಳಿಗೆ ಮಾತ್ರವಲ್ಲದೆ ಅನೇಕ ಸಂಘ ಸಂಸ್ಥೆಗಳಿಗೂ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಅನುವು ಮಾಡಿಕಡುತ್ತದೆ. ಕರ್ನಾಟಕದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ಇದು ರಾಜಧಾನಿಯಿಂದ ದೂರಿನಲ್ಲಿದೆ. ಇದು ಬ್ರಹ್ಮರ್ಷಿ ಪಂಡಿತಜಿ ಯವರಿಂದ 2003 ರಲ್ಲಿ ಸ್ಥಾಪನೆಗೊಂಡಿತು. ಕೇವಲ ಕಾರು, ಬಸ್ಸು ಮತ್ತು ಬೈಕುಗಳ ಮುಖಾಂತರ ಈ ಸ್ಥಳವನ್ನು ತಲುಪಬಹುದು. ಮೊದಲಿಗೆ ಮೈತ್ರೇಯ ಬುದ್ಧ ವಿಶ್ವಾಲಯಮ್ ಎಂದು ಕರೆಯಲ್ಪಡುತ್ತಿದ್ದ ಇದು ತದನಂತರ 'ಪಿರಮಿಡ ವ್ಯಾಲೆ' ಎಂಬ ಹೆಸರು ಪಡೆಯಿತು. ಈ ಕೇಂದ್ರವನ್ನು ಭಾರತದ ಪಿರಮಿಡ ಆಧ್ಯಾತ್ಮಿಕ ಸಂಸ್ಥಾನ ನಡೆಸುತ್ತಿರುವದರಿಂದ, ಈ ಹೆಸರನ್ನು ಪಡೆಯಿತು.ಈ ಸಂಸ್ಥೆಯ ಮುಖ್ಯ ಉದ್ದೇಶಗಳು ಧ್ಯಾನದಲ್ಲಿಯ ವಿಜ್ಞಾನದ ಪಾತ್ರ ಕುರಿತು ಅರಿವು ಮೂಡಿಸುವುದು, ಧ್ಯಾನ ಕೇಂದ್ರವಾಗಿ ಸೇವೆ ಮಾಡುವುದು ಮತ್ತು ಪಿರಮಿಡ್ ಆಧ್ಯಾತ್ಮ ಸಂಸ್ಥೆಗಳ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುವುದಾಗಿದೆ. ಈ ಒಂದು ಸ್ಥಳ ವ್ಯಾಪಾರಿಕರಣವಿಲ್ಲದ್ದಾಗಿದ್ದು, ಯಾರೊಬ್ಬರು ಚಂದಾ ಕೇಳುವುದಾಗಲಿ, ಮಾರುವುದಾಗಲಿ ಕಾಣಸಿಗುವುದಿಲ್ಲ. ಆದರೆ ಇಲ್ಲಿನ ವಿಶೀಷ್ಟತೆಯು ಧ್ಯಾನಕ್ಕೆ ಕೊಡುವ ಒತ್ತು ಮತ್ತು ಶಾಂತಪೂರ್ಣವಾದ ಪರಿಸರದಲ್ಲಿ ಅಡಗಿದೆ. ಆದ್ದರಿಂದ ಅತಿ ಶುಚಿಯಾದ ವಾತಾವರಣವನ್ನು ಇಲ್ಲಿ ಕಾಣಬಹುದು. ನಗರದ ಸಪ್ಪಳ ಮತ್ತು ಕಿರಿಕಿರಿಯಿಂದ ದೂರವಾಗಿದ್ದು, ಮನಹಪೂರ್ವಕವಾಗಿ ಉಸಿರಾಡುತ್ತ ಧ್ಯಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು.