ತೆಂತುಲಿಖುಂತಿ ಬಲಂಗೀರ್ ನಗರದಿಂದ 42 ಕಿ ಮೀ ಅಂತರದಲ್ಲಿರುವ ಹಳ್ಳಿ. ಸವಪುರಿಯ ರಾಜವಂಶದ ಆಡಳಿತ ಕಾಲದಲ್ಲಿ ಈ ಹಳ್ಳಿ ವಿವಿಧ ಧಾರ್ಮಿಕ ಆಚರಣೆಗಳ ಕ್ಷೇತ್ರವಾಗಿತ್ತು ಎಂದು ಹೇಳಲಾಗುತ್ತದೆ. ಪತ್ನಾಗರ್ ಅನ್ನು ಕ್ರಿ ಶ 8 ನೇ ಶತಮಾನದಲ್ಲಿ ಸೋಮವಂಶಿ ಕೆಶರಿಯವರು ಆಳುವ ಮೊದಲು ಸವಪುರಿಯ ರಾಜವಂಶದವರು ಆಳುತ್ತಿದ್ದರು ಎಂದು ಹೇಳಲಾಗಿದೆ. ಬಂಜರು ಭೂಮಿಯ ಸುತ್ತಲೂ ಭತ್ತದ ಗದ್ದೆಯಲ್ಲಿ ಏಕಶಿಲೆಯಲ್ಲಿ ಕೆತ್ತಲಾದ ಜಗನ್ನಾಥ, ಆತನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ಮೂರ್ತಿ ಇರುವುದನ್ನು ಇಂದಿಗೂ ಕಾಣಬಹುದು.