ರಾಜೇಂದ್ರ ಉದ್ಯಾನವನವು 100 ವರ್ಷ ಹಳೆಯದಾಗಿದ್ದು ಪತ್ನಾಗರ್ ಕೊನೆಯ ರಾಜನಾದ ರಾಜೇಂದ್ರ ನಾರಾಯಣ್ ಸಿಂಗ್ ಅವರಿಂದ ಕಟ್ಟಲಾಗಿದೆ. ಈ ಉದ್ಯಾನವನವು ಬಲಂಗೀರ್ ನ ಹೃದಯ ಭಾಗದಲ್ಲಿದೆ. ಈ ಉದ್ಯಾನವನವು ಸುಮಾರು ನೂರು ಬಗೆಯ ಗುಲಾಬಿ ಹೂವಿನ ಗಿಡ ಮತ್ತು ಬೇರೆಬೇರೆ ತಳಿಯ ಇತರ ಗಿಡಗಳನ್ನು ಕೂಡ ಹೊಂದಿದೆ. ಸಂಜೆ ಸಮಯದಲ್ಲಿ ಹಾಕಲಾಗುವ ಹಳೆಯ ಹಿಂದಿ ಹಾಡುಗಳೊಂದಿಗೆ 3 ಕಾರಂಜಿ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಈ ಹಾಡುಗಳನ್ನು ನುಡಿಸಲು ಡಾಲ್ಬಿ ಡಿಜಿಟಲ್ ಸೌಂಡ್ ವ್ಯವಸ್ಥೆ ಇದೆ. ಉದ್ಯಾನವನದ ಮಧ್ಯದಲ್ಲಿ ರಾಜೇಂದ್ರ ನಾರಾಯಣ ಸಿಂಗ್ ಅವರ ಮೂರ್ತಿ ಇರಿಸಲಾಗಿದೆ. ಈ ಉದ್ಯಾನವನವನ್ನು ಇತ್ತೀಚಿಗೆ ಪುರಸಭೆಯವರು ನವೀಕರಿಸಿದ್ದಾರೆ. ಇಲ್ಲಿ ಮಕ್ಕಳ ಆಟವಾಡುವ ವ್ಯವಸ್ಥೆ ಮತ್ತು ಕೆಫಿಟೇರಿಯಾ, ಅಮ್ಯುಸ್ಮೆಂಟ್ ಗಳು ಕೂಡ ಇವೆ. ಈ ಉದ್ಯಾನವನವು 2 ರಿಂದ 10 ರ ವರೆಗೆ ತೆರೆದಿರುತ್ತದೆ.