ಮುರ್ಸಿಂಗ್ ಒಡಿಶಾದ ಆದಿವಾಸಿ ಜನರು ವಾಸಿಸುತ್ತಿದ್ದ ಒಂದು ಪ್ರಾಚೀನ ಗ್ರಾಮ. ಮುರ ಎಂಬುವವನನ್ನು ಕೊಂದ, ವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಗ ಎಂಬುದರಿಂದ ಈ ಸ್ಥಳಕ್ಕೆ ಮುರ್ಸಿಂಗ್ ಎಂಬ ಹೆಸರು ಬಂದಿದೆ. ಈ ಸ್ಥಳವು, ದೇವಿಯ ಅಥವಾ ದೇವರ ಅತಿ ದೊಡ್ಡ ದೇವಸ್ಥಾನ ಹೊಂದಿಲ್ಲ ಆದರೂ ಇಲ್ಲಿ ಧಾರ್ಮಿಕ ವಿಧಿ ನಿರ್ವಹಣೆಗಳು ಪುರಿ ದೇವಾಲಯಗಳಿಗೆ ಹೋಲಿಸುವಷ್ಟು ಶಿಸ್ತುಬದ್ಧವಾಗಿದೆ. ಈಗ ಇಲ್ಲಿನ ಸುಂದರ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ಪೂಜೆಯನ್ನು ಪ್ರಾಸಂಗಿಕವಾಗಿ ನೆರವೇರಿಸಲಾಗುತ್ತಿದೆ ಮತ್ತು ಎಲ್ಲಾ ಕ್ರಿಯಾ ವಿಧಿಗಳು ಮತ್ತು ಉತ್ಸವಗಳನ್ನು ಹಿಂದೂ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಇಲ್ಲಿನ ಕೆಲವು ವಿಗ್ರಹಗಳನ್ನು ಸಾಕಾರೀಕರಣಗೊಳಿಸಲಾಗಿದ್ದು ಅವುಗಳನ್ನು ಈ ಹಳ್ಳಿಯಲ್ಲಿ ನಡೆಯುವ ಜಾತ್ರೆಯಲ್ಲಿ ರಥ ಯಾತ್ರೆಯ ಮೂಲಕ ಮೆರವಣಿಗೆ ಮಾಡಲಾಗುತ್ತದೆ. ಹಳೆಯ ಜಗನ್ನಾಥ ದೇವರ ವಿಗ್ರಹವನ್ನು ಆರಾಧಿಸುತ್ತಿದ್ದ ಬಿಜಯ್ ಕುಮಾರ್ ಮೊಹಂತಿ ಎಂಬ ಗುರುಗಳ ಮಾರ್ಗದರ್ಶನದಡಿಯಲ್ಲಿ ಸ್ಥಳೀಯರು ಪುರಿ ಪೀಠದ ರಾಜಗುರುವನ್ನು ವಿಗ್ರಹ ಪೂಜಿಸಲು ಆಹ್ವಾನಿಸಿದ್ದರು.