ಬಲಂಗೀರ್ ನಿಂದ 5 ಕಿ ಮೀ ಅಂತರದಲ್ಲಿರುವ ಕುಜೆನ್ ಪಲಿ ಎಂಬಲ್ಲಿ ಈ ಆಶ್ರಮ ಇರುವುದರಿಂದ ಇದನ್ನು ಕುಜೆನ್ ಪಲಿ ಆಶ್ರಮ ಎಂದು ಕೂಡ ಕರೆಯುತ್ತಾರೆ. ಈ ಆಶ್ರಮವನ್ನು 1985 ರಲ್ಲಿ ಪರಮಹಂಸ ಸ್ವಾಮೀ ಶ್ರೀ ಸತ್ಯಪ್ರಜಾನಂದ ಸರಸ್ವತಿ ಅವರಿಂದ ಕಟ್ಟಲಾಗಿದೆ. ಈ ಆಶ್ರಮವು 40 ಎಕರೆ ಭೂಮಿಯನ್ನು ಹೊಂದಿದೆ.
ಈ ಆಶ್ರಮ ಸುತ್ತಲೂ ವಿಶ್ವಾತ್ಮ ವಿದ್ಯಾಮಂದಿರ ಶಾಲೆ, ಅಶುತೋಷ ಪೀಠ, ಸಾಧನ ಕ್ಷೇತ್ರ, ಪೂಜಾ ಮಂಟಪ, ಯೋಗ ಶಾಲೆ, ಪ್ರಜ್ಞ ಕುಟೀರ, ಸಂತ ನಿವಾಸ, ಉದ್ಯಾನವನ ಮತ್ತು ಹಸಿರು ಕಾಡುಗಳನ್ನು ಒಳಗೊಂಡಿದೆ. ಪ್ರತಿವರ್ಷ ಸಾವಿರಾರು ಜನರು ಇಲ್ಲಿ ಶಾಂತಿಗಾಗಿ ಬರುತ್ತಾರೆ.
ಜನರು ಇಲ್ಲಿಗೆ ಯೋಗ ಕಲಿಯಲು ಕೂಡ ಬರುತ್ತಾರೆ. ನವರಾತ್ರಿ, ಗುರುಪೂರ್ಣಿಮ, ಶಿವರಾತ್ರಿಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಈ ಆಶ್ರಮವು ಭೇಟಿ ನೀಡಲು ಉತ್ತಮವಾದ ಸ್ಥಳವಾಗಿದೆ.