ಬಾದಾಮಿಯ ಸಾನಿಧ್ಯದಲ್ಲಿರುವ ಬನಶಂಕರಿ ದೇವಾಲಯವನ್ನು 7ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದರೆಂದು ನಂಬಲಾಗಿದೆ. ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಲ್ಲಿ ಹೇಳಿರುವಂತೆ ಬನಶಂಕರಿಯಲ್ಲಿ ದುರ್ಗಮಾಸುರನೆಂಬ ರಾಕ್ಷಸನನ್ನು ಸಂಹಾರಿಸಿದ ದೇವಿ ಪಾರ್ವತಿಯ ಅವತಾರವಾದ ಚಾಲುಕ್ಯರ ಕುಲದೇವಿಯು ಈ ದೇವಾಲಯದಲ್ಲಿ ಆರಾಧಿಸಲ್ಪಡುವ ದೇವತೆ. ಈ ಬನಶಂಕರಿ ದೇವಾಲಯದಲ್ಲಿ ದೇವಿಯ ಮೂರ್ತಿಯನ್ನು ಕಪ್ಪು ಕಲ್ಲಿನಿಂದ ಕೊರೆಯಲಾಗಿದ್ದು ಆಕೆಯು ಸಿಂಹದ ಮೇಲೆ ಕುಳಿತಿರುವ ಭಂಗಿಯಲ್ಲಿ ಇರಲು ಪಾದದಡಿ ಸಿಲುಕಿರುವ ರಾಕ್ಷಸನನ್ನು ಸಹಾ ಕಾಣಬಹುದು. ದೇವಿಯು ತನ್ನ ಆಷ್ಟ ಕೈಗಳಲ್ಲಿ ತ್ರಿಶೂಲ, ಘಂಟೆ, ಕಮಲಾಪತ್ರ, ಡಮರುಗ, ಖಡ್ಗ ಮತ್ತು ಪವಿತ್ರ ವೇದ ಬರಹಗಳನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ.
ಬನಶಂಕರಿ ದೇವಾಲಯ 7ನೇ ಶತಮಾನದಲ್ಲೇ ನಿರ್ಮಿತವಾಗಿದ್ದರೂ ಅದನ್ನು 17ನೇ ಶತಮಾನದಲ್ಲಿ ಮರಾಠರಲ್ಲಿ ಪ್ರಮುಖನಾಗಿದ್ದ ಪರಸುರಾಮ್ ಅಗಲೆ ಎಂಬವನು ದುರಸ್ತಿಗೊಳಿಸಿದನು. ಈ ಪುರಾತನ ದೇವಾಲಯವು ದ್ರಾವಿಡ ಶೈಲಿಯ ವಾಸ್ತು ಶೈಲಿಯನ್ನು ಪ್ರದರ್ಶಿಸುತ್ತದೆ ಈ ದೇವಾಲಯಕ್ಕೆ ಪುಷ್ಯಮಾಸವಾದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಭೇಟಿ ಕೊಟ್ಟರೆ ಪ್ರವಾಸಿಗರಿಗೆ ಇಲ್ಲಿನ ಸ್ಥಳೀಯರು ಆಯೋಜಿಸುವ ದೇವಾಲಯದ ರಥದ ಮೆರವಣಿಗೆಯಲ್ಲಿ ಪಾಲ್ಗೊಳ್ಳವ ಅವಕಾಶವಿರುತ್ತದೆ. ತಿಲಕಾರಣ್ಯದಲ್ಲಿ ನೆಲೆಸಿಹ ಈ ದೇವಾಲಯವು ಬನ ಮತ್ತು ಶಂಕರಿ ಎಂಬ ಎರಡು ಪದಗಳ ಸಂಯೋಜನೆಯಿಂದ ಹೆಸರನ್ನು ಪಡೆದುಕೊಂಡಿದೆ. ಬನ ಎಂದರೆ ಕಾಡು ಮತ್ತು ಶಂಕರಿ ಎಂದರೆ ಶಿವ ಪ್ರಿಯೆ ಅಥವಾ ಪಾರ್ವತಿಯನ್ನು ಬಣ್ಣಿಸುವ ರೀತಿ.